ಗುಬ್ಬಿ : ಕ್ಷೇತ್ರದ ಜನರ ಬವಣೆ ನೀಗಿಸಿದ ಶಾಸಕ ಎಂ,ಟಿ ಕೃಷ್ಣಪ್ಪ

ಗುಬ್ಬಿ :

ಗುಬ್ಬಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಎಂ.ಟಿ ಕೃಷ್ಣಪ್ಪ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕರು, 15 ನೇ ಹಣಕಾಸು ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದೆ. ನನ್ನ ಕ್ಷೇತ್ರದ 10 ಗ್ರಾಮಗಳ ಜನರ ಮನವಿಗೆ ಸ್ಪಂದಿಸಿ ಗ್ರಾಮ ಪಂಚಾಯ್ತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳೀಯರ ಕುಡಿಯುವ ನೀರಿನ ಬವಣೆಯನ್ನು ನೀಗಿಸಿರುವುದು ಸಂತಸ ತಂದಿದೆ ಎಂದರು.

ಇನ್ನು ಈ ವೇಳೆ ಮಾತನಾಡಿದ ಮಾಜಿ ಸದಸ್ಯ ಹಾಗೂ ಕೆಡಿಪಿ ಸದಸ್ಯ ಮಹಮ್ಮದ್ ಯೂಸಫ್, ಕೊಟ್ಟ ಮಾತಿನಂತೆ ಕೇವಲ 10 ತಿಂಗಳ  ಅವಧಿಯಲ್ಲಿ ಬರೋಬ್ಬರಿ 2 ಕೋಟಿ ಅನುದಾನ ತಂದು  ಅಭಿವೃದ್ಧಿ ಕಾಮಗಾರಿಗೆ ಮುಂದಾಗಿರುವುದು  ನಮಗೆಲ್ಲ ಸಂತಸ  ತಂದಿದೆ ಎಂದು ಶಾಸಕರ ಕೆಲಸಕ್ಕೆ ಮೆಚ್ಚುಗೆ ತಿಳಿಸಿದರು.

 

Author:

...
Keerthana J

Copy Editor

prajashakthi tv

share
No Reviews