MANGALORE NEWS : ಮಂಗಳೂರು ನಗರದಲ್ಲಿ ಭಾರಿ ಮಳೆಯಿಂದಾಗಿ ಜಲಾವೃತಗೊಂಡ ಪ್ರದೇಶಗಳ ಸಂತ್ರಸ್ತರಿಗೆ ಸಹಾಯ ಹಸ್ತವೊಂದಾಗಿ, ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಇಂದು (ಜೂನ್ 16) ಮಧ್ಯಾಹ್ನದ ಊಟದ ವ್ಯವಸ್ಥೆ ನಡೆಸಲು ನಿರ್ಧರಿಸಿದೆ. ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿರುವ ಕಾರಣ ಜನರಿಗೆ ಅಡುಗೆ ಮಾಡಲು ತೊಂದರೆಯಾಗಿದೆ.
ಈ ಸಂದರ್ಭದಲ್ಲಿ ತೀವ್ರವಾಗಿ ತೊಂದರೆ ಅನುಭವಿಸುತ್ತಿರುವ ಕುಟುಂಬಗಳಿಗಾಗಿ ದೇವಸ್ಥಾನದ ಆವರಣದಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರು ತಮ್ಮ ಮನೆಯ ಸದಸ್ಯರಿಗೆ ಬೇಕಾದಷ್ಟು ಊಟವನ್ನು ದೇವಸ್ಥಾನಕ್ಕೆ ಬಂದು ತೆಗೆದುಕೊಂಡು ಹೋಗಬಹುದಾಗಿದೆ ಎಂದು ಹೋಗಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.
ಸಂಪರ್ಕಿಸಬಹುದಾದ ಸಂಖ್ಯೆ :
ದಿಲ್ ರಾಜ್ ಆಳ್ವ ಮಂಗಳಾದೇವಿ- 9900512727
ರಾಜೇಂದ್ರ ಚಿಲಿಂಬಿ-9972185251
ಕಿರಣ್ ಕೊಡಿಯಾಲ್ ಬೈಲ್- 7899509356
ಅರುಣ್ ಕದ್ರಿ- 924330380