ತಿಪಟೂರು : ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ | ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ

ತಿಪಟೂರು : ಇತ್ತೀಚಿನ ದಿನಗಳಲ್ಲಿ KSRTC ಬಸ್‌ಗಳು ಯಮಸ್ವರೂಪಿಯಾಗ್ತಿದ್ದು, ಅಮಾಯಕ ಜೀವಗಳು ಬಲಿಯಾಗ್ತಿವೆ,, KSRTC ಬಸ್‌ ಚಾಲಕರಿಗೆ ಸ್ಟೀಡ್‌ ಬ್ರೇಕರ್‌ಗಳೇ ಇಲ್ವಾ ಎಂಬ ಪ್ರಶ್ನೆ ಮೂಡಿದೆ. ಇದೀಗ ಕೆಎಸ್‌ಆರ್‌ಟಿಸಿ ಬಸ್‌ನ ಅತಿವೇಗದ ಚಾಲನೆಯಿಂದ ಬೈಕ್‌ ಸವಾರರು ಸ್ಥಳದಲ್ಲೇ ಉಸಿರುನಿಲ್ಲಿಸಿದ್ದಾರೆ, ಬೈಕ್‌ಗೆ KSRTC ಬಸ್‌ ಡಿಕ್ಕಿಹೊಡೆದ ಪರಿಣಾಮ ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಿಪಟೂರು ತಾಲೂಕಿನ ಮತ್ತಿಹಳ್ಳಿ ಬಳಿ ನಡೆದಿದೆ. ಬೈಕ್‌ ಸವಾರರಾದ ಉಮೇಶ್‌ ಹಾಗೂ ರಜನಿಕಾಂತ್‌ ಮೃತ ದುರ್ದೈವಿಗಳಾಗಿದ್ದಾರೆ, ಇತ್ತ ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ತಿಪಟೂರಿನ ಮತ್ತಿಹಳ್ಳಿ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹಂಸ್‌ ಕೂಡ ಇದ್ಯಂತೆ, ಆದ್ರು ಕೂಡ ಕೆಎಸ್‌ಆರ್‌ಟಿಸಿ ಡ್ರೈವರ್‌ ಬಸ್‌ನನ್ನು ಅತಿವೇಗವಾಗಿ ಚಾಲನೆ ಮಾಡಿದ್ದು, ಏಕಾಏಕಿ ಬೈಕ್‌ಗೆ ಡಿಕ್ಕಿಹೊಡೆದಿದೆ. ಡಿಕ್ಕಿ ಹೊಡೆಯುತ್ತಿದ್ದಂತೆ ಬೈಕ್‌ ಸವಾರರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ತೀವ್ರ ರಸ್ತೆ ಸ್ರಾವದಿಂದ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಾದ ಉಮೇಶ್‌ ಹಾಗೂ ರಜನಿಕಾಂತ್‌ ಮದುವೆಯಾಗಿ ಇಬ್ಬರಿಗೂ ಇಬ್ಬಿಬ್ಬರು ಮಕ್ಕಳು ಇದ್ದಾರೆ. ಮನೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡು ಕುಟುಂಬಸ್ಥರು ಗೋಳಾಡುತ್ತಿದ್ಧಾರೆ.

ಇನ್ನು ಈ ಭೀಕರ ಅಪಘಾತಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ರು. ಮೃತರಿಗೆ ಸರ್ಕಾರದಿಂದ ಪರಿಹಾರ ನೀಡಬಹುದು ಆದ್ರೆ ಕುಟುಂಬಕ್ಕೆ ಆದ ನಷ್ಟವನ್ನು ಕಟ್ಟಿಕೊಡಲು ಸಾಧ್ಯವಿಲ್ಲ.. ಮನೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡು ಆ ಕುಟುಂಬಕ್ಕೆ ಯಾರು ದಿಕ್ಕು ಎಂದು ಆಕ್ರೋಶ ಹೊರಹಾಕಿದ್ರು.

ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದೇನೆ ಆಗಲಿ KSRTC ಬಸ್‌ನ ಅತಿವೇಗದ ಚಾಲನೆಯಿಂದ ಅಮಾಯಕರು ಬಲಿಯಾಗಿದ್ದು ಮಾತ್ರ ದುರಂತ.. ಇನ್ನಾದ್ರು ಕೆಎಸ್‌ಆರ್‌ಟಿಸಿ ನಿಗಮ ಎಚ್ಚೆತ್ತುಕೊಂಡು ಯಮಸ್ವರೂಪಿಯಾದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕಡಿವಾಣ ಹಾಕಬೇಕಿದೆ.

Author:

...
Keerthana J

Copy Editor

prajashakthi tv

share
No Reviews