ಕೊಲ್ಕಾತ್ತಾ : ಅತ್ತಿಗೆಯ ಶಿರಚ್ಛೇದನ ಮಾಡಿ ರುಂಡ ಹಿಡಿದು ಬೀದಿಯಲ್ಲಿ ತಿರುಗಿದ ವ್ಯಕ್ತಿ ..!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿ ಪ್ರದೇಶದ ಭರತ್‌ಗಢ ಎಂಬ ಗ್ರಾಮದಲ್ಲಿ. ವ್ಯಕ್ತಿಯೋರ್ವ ತನ್ನ ಅತ್ತಿಗೆಯ ಶಿರಚ್ಛೇದನ ಮಾಡಿ, ಅವರ ತಲೆಯನ್ನು ಕೈಯಲ್ಲಿ ಹಿಡಿದು ಗ್ರಾಮದಲ್ಲಿ ತಿರುಗಿದ ಭೀಕರ ಘಟನೆ ನಡೆದಿದೆ. ಸತಿ ಮಂಡಲ್‌ ಎಂಬುವರನ್ನು ಹತ್ಯೆಯಾದ ದುರ್ದೈವಿಯಾಗಿದ್ದಾರೆ. ಬಿಮಲ್‌ ಮಂಡಲ್‌ ಎಂಬಾತ ಈ ಕೃತ್ಯ ಎಸಗಿದ್ದಾನೆ.

ಬಿಮಲ್ ಮತ್ತು ಸತಿಯ ನಡುವೆ ವೈಯಕ್ತಿಕ ವಿಚಾರದ ಬಗ್ಗೆ ತೀವ್ರ ಜಗಳ ಉಂಟಾಗಿ, ಬಿಮಲ್ ಕುಡುಗೋಲುನಿಂದ ಆಕೆಯ ತಲೆಯನ್ನು ಕತ್ತರಿಸಿದ್ದಾನೆ. ಬಳಿಕ ಆಕೆಯ ರುಂಡವನ್ನು ಹಿಡಿದು ಬೀದಿಯಲ್ಲಿ ಓಡಾಡಿದ್ದಾನೆ. ಈ ದೃಶ್ಯಗಳನ್ನು ಹಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದ್ದು, ಆ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗ್ತಿವೆ.

ವಿಷಯ ತಿಳಿದು ಬಸಂತಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿತ ಬಿಮಲ್ ಮಂಡಲ್‌ರನ್ನು ಬಂಧಿಸಲಾಗಿದೆ.

Author:

...
Sushmitha N

Copy Editor

prajashakthi tv

share
No Reviews