Kalaburagi : ಕೋರ್ಟ್ ಹಾಲ್‌ಗೆ ತೆರಳುವ ಮುನ್ನ ಹೃದಯಾಘಾತ | ಹಿರಿಯ ನ್ಯಾಯಾಧೀಶ ಸಾವು

KALABURAGI: ಕೋರ್ಟ್ ಹಾಲ್‌ಗೆ ಹೋಗುವ ಕೆಲವೇ ನಿಮಿಷಗಳ ಮುನ್ನ ಹೃದಯಾಘಾತ ಸಂಭವಿಸಿ ಹಿರಿಯ ನ್ಯಾಯಾಧೀಶರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಮೃತರು ಕಲಬುರಗಿ 3ನೇ ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ವಿಶ್ವನಾಥ್ ವಿ. ಮೂಗತಿ (44) ಎಂಬುವರು ಮೃತ ದುರ್ದೈವಿಯಾಗಿದ್ದಾರೆ.

ಕಚೇರಿಗೆ ಹೋಗಲು ಸಿದ್ಧತೆ ಮಾಡಿಕೊಂಡು ಕೋರ್ಟ್‌ ಹಾಲ್‌ಗೆ ಹೊರಟ ಸಂದರ್ಭದಲ್ಲಿ ತೀವ್ರ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಸಹೋದ್ಯೋಗಿಗಳು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.  ವಿಶ್ವನಾಥ್ ಮೂಗತಿ ಅವರು ಸದಾ ಶಿಸ್ತಿನ ನ್ಯಾಯಾಧೀಶರಾಗಿದ್ದು, ನಿಷ್ಠೆ, ಸಮಯಪಾಲನೆ ಮತ್ತು ನಿಯಮ ಬದ್ಧತೆಗಾಗಿ ಸಹೋದ್ಯೋಗಿ -ಗಳಲ್ಲಿ ಮತ್ತು ನ್ಯಾಯಾಲಯ ಸಿಬ್ಬಂದಿಯಲ್ಲಿ ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದರು ಎನ್ನಲಾಗಿದೆ..

ಈ ಅಕಾಲಿಕ ಸಾವಿಗೆ ನ್ಯಾಯಾಲಯದ ಸಿಬ್ಬಂದಿ, ನ್ಯಾಯವಾದಿಗಳು ಮತ್ತು ಅಧಿಕಾರಿಗಳು ಶೋಕ ವ್ಯಕ್ತಪಡಿಸಿದ್ದಾರೆ. ಕೆಲ ಸಮಯ ಕೋರ್ಟ್ ಕಾರ್ಯವಿಧಾನಗಳನ್ನೂ ಸ್ಥಗಿತಗೊಳಿಸಲಾಗಿದೆ.

Author:

...
Sushmitha N

Copy Editor

prajashakthi tv

share
No Reviews