KOPPALA NEWS : ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿಯವರಿಗೆ ತೆಲಂಗಾಣ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಗಂಗಾವತಿ ನಗರದಲ್ಲಿ ಉತ್ಸವದ ವಾತಾವರಣ ನಿರ್ಮಾಣವಾಗಿದೆ.
ರೆಡ್ಡಿಯವರಿಗೆ ಜಾಮೀನು ಸಿಕ್ಕ ಸುದ್ದಿಯು ಹರಡಿದ ತಕ್ಷಣವೇ ಅವರ ಬೆಂಬಲಿಗರು ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಆರಂಭಿಸಿದರು. ಬಣ್ಣ ಎರಚುವ ಮೂಲಕ ಜಯಘೋಷ ಕೂಗಿ, ಎತ್ತುಗಳನ್ನು ಅಲಂಕಾರಗೊಳಿಸಿ ಮೆರವಣಿಗೆ ನಡೆಸಿದ ದೃಶ್ಯಗಳು ನಗರದಲ್ಲಿ ಗಮನಸೆಳೆದವು.
ಬೆಂಬಲಿಗರು ರೆಡ್ಡಿಯವರ ಫೋಟೋ ಹಿಡಿದು, "ಜನರ ನಾಯಕ ಜನಾರ್ದನ ರೆಡ್ಡಿ ಜಿಂದಾಬಾದ್!" ಎನ್ನುವ ಘೋಷಣೆಗಳನ್ನು ಕೂಗಿ, ಹರ್ಷೋದ್ಗಾರ ವ್ಯಕ್ತಪಡಿಸಿದರು. ಜನಾರ್ದನ ರೆಡ್ಡಿಯವರಿಗೆ ಷರತ್ತುಬದ್ಧ ಜಾಮೀನು ನೀಡಿರುವುದು ಅವರ ರಾಜಕೀಯ ಭವಿಷ್ಯಕ್ಕೆ ಹೊಸ ಬಾಗಿಲು ತೆರೆಯಬಹುದೆಂದು ರಾಜಕೀಯ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.