BANGALORE : RCB ಗೆಲುವಿಗಾಗಿ ತಾಯಿ ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ ಮಾಡ್ತೇನೆ | ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

BANGALORE NEWS : IPL 2025ರ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು[RCB] ತಂಡದ ಗೆಲುವಿಗಾಗಿ ರಾಜ್ಯದ ಸಚಿವರು ಕೂಡ ಭಾವನಾತ್ಮಕವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ [LAKSMI HEBALKAR] “RCB ಕಪ್ ಗೆಲ್ಲಲಿ ಎಂದು ನಾನು ತಾಯಿ ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ ಮಾಡ್ತೇನೆ. ನಾನು ಕ್ರಿಕೆಟ್‌ನ ದೊಡ್ಡ ಅಭಿಮಾನಿ. ಈ ಬಾರಿ ದೇವರು ಆಟಗಾರರಿಗೆ ಶಕ್ತಿ ಕೊಡಲಿ ಎಂದು ಕೋರುತ್ತೇನೆ” ಎಂದು ಅವರು ತಿಳಿಸಿದರು.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ RCB ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದು, ಅಭಿಮಾನಿಗಳ ಭರವಸೆ ಉಜ್ವಲವಾಗಿದೆ. ಸಚಿವೆ ಹೆಬ್ಬಾಳ್ಕರ್ ಅವರು, “RCB ನಾಲ್ಕು ಬಾರಿ ಫೈನಲ್ಗೆ ಬಂದಿದ್ದು, ಈ ಬಾರಿಯು ‘ಕಪ್ ನಮ್ದೇ’ [CUP NAMDE] ಎಂಬ ಆಶಯ ನನಗಿದೆ” ಎಂದರು.

ಇನ್ನು ಜೂನ್ 3ರಂದು, NARENDRA MODI STADIUM ಗುಜರಾತ್‌ನಲ್ಲಿ ನಡೆಯಲಿರುವ ಬೃಹತ್ ಫೈನಲ್‌ನಲ್ಲಿ RCB ಮತ್ತು PBKS  ಮುಖಾಮುಖಿಯಾಗಲಿವೆ. ಈ ನಡುವೆ RCB ಅಭಿಮಾನಿಗಳಿಂದ "ಕಪ್ ನಮ್ದೇ" ಎಂಬ ಘೋಷಣೆಗಳು ಕೇಳಿ ಬರುತ್ತಿವೆ.

ರಾಜ್ಯಮಟ್ಟದ ರಾಜಕಾರಣಿಗಳೂ ಸೇರಿದಂತೆ ಎಲ್ಲ ಕನ್ನಡಿಗರು RCB ಗೆಲುವಿಗಾಗಿ ಒಗ್ಗಟ್ಟಾಗಿ ಬಯಸುತ್ತಿರುವ ಈ ಕ್ಷಣದಲ್ಲಿ, ನಾಳೆಯ FINAL ಪಂದ್ಯ ಅಭಿಮಾನಿಗಳ ಭಾವನೆ, ಆಶಯ, ಮತ್ತು ಕ್ರೀಡಾ ಹಬ್ಬವಾಗಿ ಪರಿವರ್ತನೆಯಾಗಲಿದೆ.

 

Author:

...
Keerthana J

Copy Editor

prajashakthi tv

share
No Reviews