TUMAKURU : ಇಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಜಿಲ್ಲಾ ಪಂಚಾಯಿತಿ ಸಿಇಓ ಪ್ರಭು.ಜಿ ಯೊಂದಿಗೆ ತುಮಕೂರಿನ ಕ್ಯಾತಸಂದ್ರದಲ್ಲಿರುವ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದರು.
ನಗರಕ್ಕೆ ಸಮೀಪವಿರುವ ಬಸವಪಟ್ಟಣದ ಮೈದಾಳ ರಸ್ತೆಯಲ್ಲಿರುವ ದೇವರಾಜು ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳೆಯರ ವಿದ್ಯಾರ್ಥಿ ನಿಲಯಕ್ಕೆ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಡುಗೆ ಮನೆಯ ಸ್ವಚ್ಛತೆ, ರೂಂಗಳ ಸ್ವಚ್ಛತೆ ನೋಡಿ, ಲೈಬ್ರರಿ ರೂಂಗೆ ವಿಸಿಟ್ ಮಾಡಿದರು, ನಂತರ ವಿದ್ಯಾರ್ಥಿಗಳು ಮಲಗುವ ಕೋಣೆಗೆ ತೆರಳಿ ಬೆಡ್ಗಳ ಸ್ವಚ್ಚತೆಯನ್ನು ಪರಿಶೀಲಿಸಿದರು. ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ನ ವ್ಯವಸ್ಥೆಯ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು. ಇನ್ನು ಊಟದ ಮೆನುವನ್ನು ಕೂಡ ಪರಿಶೀಲಿಸಿದ್ದು, ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆ ಎಷ್ಟಿದೆ, ಹಾಸ್ಟೆಲ್ ಗೆ ಮತ್ತೇನಾದರೂ ಅವಶ್ಯಕತೆ ಇದೇಯೇ ಎಂದು ಅಧಿಕಾರಿಗಳು ಮತ್ತು ವಾರ್ಡನ್ ಬಳಿ ಚರ್ಚಿಸಿ ಮಾಹಿತಿ ಪಡೆದರು.
ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 262 ಹಾಸ್ಟೆಲ್ಗಳಿವೆ. 119 ಬಿಸಿಂ, ಅಲ್ಪಸಂಖ್ಯಾತ – 21, ಪರಿಶಿಷ್ಟ ವರ್ಗದ 16 ಹಾಸ್ಟೆಲ್ ಗಳು ಇವೆ. ಇತ್ತ ಸರ್ಕಾರದ ಮಂಜೂರಾತಿಯ ಆಧಾರದ ಮೇಲೆ ಮಕ್ಕಳನ್ನು ಹಾಸ್ಟೆಲ್ ಗೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. 104 ಹಾಸ್ಟೆಲ್ ಗಳಲ್ಲಿ 10,726 ವಿದ್ಯಾರ್ಥಿಗಳ ಮಂಜೂರಾತಿಯಾಗಿದ್ದು ಅದರಲ್ಲಿ 11,912 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿದ್ದೇವೆ. ಬಿಸಿಎಂ 11 ಸಾವಿರ ಮಂಜೂರಾತಿ ಆಗಿದ್ದು, 10 ಸಾವಿರ ಮಕ್ಕಳು ದಾಖಲಾತಿಯಾಗಿದ್ದಾರೆ. ಅಲ್ಪಸಂಖ್ಯಾತರಲ್ಲಿ 1,150 ಮಂಜೂರಾಗಿದ್ದು, 1,774 ದಾಖಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಎಸ್ಪಿ ಕೆ.ವಿ. ಅಶೋಕ್ ಹಾಗೂ ಅಧಿಕಾರಿಗಳು ಸಾಥ್ ನೀಡಿದರು.