ತುಮಕೂರು : ರಾಜ್ಯದಲ್ಲಿ ಪೂರ್ವ ಮುಂಗಾರು ಅಬ್ಬರಿಸಿದ್ದು, ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಹೀಗಾಗಿ ತುಮಕೂರಿಗೆ ಕುಡಿಯುವ ನೀರನ್ನು ಒದಗಿಸುವ ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರನ್ನು ಹರಿಸಲಾಗ್ತಿದೆ. ಬೇಸಿಗೆಯಲ್ಲಿ ತುಮಕೂರಿಗೆ ಕುಡಿಯುವ ನೀರು ಪೂರೈಸುವ ಬುಗಡನಹಳ್ಳಿ ಕೆರೆ ಖಾಲಿಯಾಗಿತ್ತು.. ಹೀಗಾಗಿ ಮುಂಗಾರು ಮಳೆ ಆರಂಭದಲ್ಲೇ ಹೇಮಾವತಿ ನೀರಿನಮಟ್ಟ ಹೆಚ್ಚಳವಾಗಿದ್ದು, ಬುಗುಡನಹಳ್ಳಿ ಕೆರೆಗೆ ಹೇಮೆ ನೀರು ಹರಿಸಲಾಗ್ತಿದ್ದು, ತುಮಕೂರಿಗರ ಬವಣೆ ನೀಗಿಸುವಂತಾಗಿದೆ.
ಕಳೆದ ಎರಡು ದಿನಗಳಿಂದ ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಿಂದ ಬುಗುಡನಹಳ್ಳಿ ಕೆರೆಗೆ ನೀರು ಹರಿಸಲಾಗ್ತಿದ್ದು, ಮೊನ್ನೆ ಡಾ.ಜಿ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇಂದು ಬೆಳಗ್ಗೆಯೇ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಶಾಸಕ ಜ್ಯೋತಿ ಗಣೇಶ್ ಬುಗುಡನಹಳ್ಳಿ ಕೆರೆಗೆ ತೆರಳಿ ಕೆರೆ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಶಾಸಕ ಜ್ಯೋತಿಗಣೇಶ್ಗೆ ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರು ಕೂಡ ಸಾಥ್ ನೀಡಿದ್ರು.
ಇನ್ನು ಬೇಸಿಗೆಯಲ್ಲಿ ತುಮಕೂರಿಗರಿಗೆ ಬುಗುಡನಹಳ್ಳಿ ಕೆರೆಯಿಂದ ನೀರು ಶುದ್ಧೀಕರಣ ಮಾಡಿ, ಕುಡಿಯಲು ನೀರನ್ನು ಪೂರೈಸಲಾ ಗ್ತಿತ್ತು. ಆದ್ರೆ ಬೇಸಿಗೆಯಲ್ಲಿ ಬುಗಡನಹಳ್ಳಿ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿ ನೀರಿನ ಅಭಾವ ಕೂಡ ಉಂಟಾಗಿತ್ತು. ಆದ್ರೀಗ ಹೇಮಾವತಿ ಜಲಾಶಯದಿಂದ ಸುಮಾರು 600 ಕ್ಯೂಸೆಕ್ ನೀರು ಹರಿಸಲಾಗ್ತಿದೆ. ಬುಗಡನಹಳ್ಳಿಗೆ ನೀರು ಹರಿಯಲು ಪರಮೇಶ್ವರ್ ಅವರ ಶ್ರಮ ಹಾಕಿದ್ದು, ಪರಮೇಶ್ವರ್ ಅವರಿಗೆ ಧನ್ಯವಾದ ತಿಳಿಸಿದ್ರು.
ಒಟ್ನಲ್ಲಿ ಮುಂಗಾರು ಮಳೆ ಆರಂಭದ ಬೆನ್ನಲ್ಲೇ ತುಮಕೂರಿಗರ ಬವಣೆ ನೀಗಿಸುವ ಬುಗಡನಹಳ್ಳಿ ಕೆರೆಗೆ ನೀರು ಹರಿಯುತ್ತಿದ್ದು ತುಮಕೂರಿಗರು ನಿಟ್ಟುಸಿರು ಬಿಟ್ಟಿದ್ದಾರೆ.