DAKSHNA KANNADA RAIN : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ನೆನ್ನೆ ಜಿಲೆಯ ವಿವಿಧೆಡೆ ಗುಡ್ಡ ಕುಸಿತ, ಗೋಡೆ ಕುಸಿತ ಹಾಗೂ ರಸ್ತೆಗಳ ಬಂದ್ ಆಗಿರುವ ಘಟನೆಗಳು ವರದಿಯಾಗಿವೆ.
ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ, ಮಂಗಳೂರು ನಗರದ ಬಹುಭಾಗಗಳು ಜಲಾವೃತಗೊಂಡಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಪಾಂಡೇಶ್ವರದ ಶಿವನಗರದ ನಾಲ್ಕನೇ ಕ್ರಾಸ್ ಬಳಿ ನದಿ ನೀರು ರಸ್ತೆಗೆ ಹರಿದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಜನರು ಮನೆಗಳೊಳಗೆ ನೀರು ನುಗ್ಗಿದ ಕಾರಣ ತೀವ್ರ ಅಡಚಣೆಗೆ ಒಳಗಾಗಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೂ ಮುಂದಿನ ಕೆಲ ದಿನ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಜನತೆ ಅನಾವಶ್ಯಕವಾಗಿ ಬಾಗದ ಸ್ಥಳಗಳಿಗೆ ತೆರಳದೆ, ಸುರಕ್ಷತೆ ಪಾಲಿಸಬೇಕೆಂದು ಜಿಲ್ಲಾಡಳಿತ ತಿಳಿಸಿದೆ.