GUBBI : ರಾಜ್ಯದಲ್ಲಿ ಜಾತಿ ಗಣತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿ ಹಲವು ಭಿನ್ನಾಭಿಪ್ರಾಯಗಳು ಕೂಡಾ ಚರ್ಚೆಯಾಗಿ ಹೊರಬಂತು. ಎಲ್ಲಿ ? ಹೇಗೆ ? ಯಾರು? ಗಣತಿ ಮಾಡಿದ್ದರು ಎಂಬುದು ಸಹ ಗೊಂದಲವಾಗಿತ್ತು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮರು ಜಾತಿಗಣತಿಗೆ ಸೂಚಿಸಿದ್ದು ಸ್ವಾಗತಾರ್ಹ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.
ತಾಲ್ಲೂಕಿನ ನಿಟ್ಟೂರು ಪುರ ಕಾಲೊನಿ, ಬೆಲವತ್ತ, ಅತ್ತಿಕಟ್ಟೆ ಗ್ರಾಮದಲ್ಲಿ ಒಟ್ಟು ಮೂರು ಕೋಟಿಯ ಸಿಸಿ ರಸ್ತೆಗಳ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತ ಗೊಂದಲಕ್ಕೆ ತೆರೆ ಎಳೆಯಲು ಎಸ್ಸಿ ಸಮುದಾಯದ ಗಣತಿ ದತ್ತಾಂಶ ಪಡೆಯಲಾಯಿತು. ಇದು ಒಳ ಮೀಸಲಾತಿ ಹಂಚಿಕೆಗೆ ಪೂರಕವಾಗಿದೆ. ಇದೇ ಮಾದರಿ ಸರಿಯಾದ ರೀತಿಯಲ್ಲಿ ಜಾತಿ ಗಣತಿ ನಡೆಯಲಿ ಎಂದು ತಿಳಿಸಿದರು.
ಇನ್ನು ತುಮಕೂರು ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂಬ ಹೆಸರು ಬೇಕಿಲ್ಲ. ಬೆಂಗಳೂರು ನಗರಕ್ಕೆ ಸಮೀಪದ ತುಮಕೂರು ಎಲ್ಲಾ ರಂಗದಲ್ಲೂ ಬೆಳೆದಿದೆ. ಕೈಗಾರಿಕಾ ವಲಯ ಇಲ್ಲಿ ವಿಸ್ತರಣೆಯಾದ ಕಾರಣ ಬೆಂಗಳೂರು ಹೆಸರು ಇಲ್ಲಿಗೂ ನಾಮಕರಣ ಮಾಡುವ ಉದ್ದೇಶ ಅವರ ಇಚ್ಛೆ. ಆದರೆ ನಮ್ಮ ತುಮಕೂರು ಹೆಸರು ಹಾಗೆಯೇ ಉಳಿಯಲಿ ಎಂಬುದು ನಮ್ಮ ಆಶಯ ಎಂದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಂಜೇಗೌಡ, ಬೆಲವತ್ತ ಗ್ರಾಪಂ ಅಧ್ಯಕ್ಷೆ ಲತಾ ದಯಾನಂದ್, ಉಪಾಧ್ಯಕ್ಷ ಆನಂದ, ಸದಸ್ಯರಾದ ಎನ್.ಬಿ.ರಾಜಶೇಖರ್, ವೆಂಕಟೇಶ್, ಜಯಮ್ಮ, ತಾರಾದೇವಿ, ಸ್ವಾಮಿ, ಇತರರು ಹಾಜರಿದ್ದರು.