TUMAKURU NEWS : ತುಮಕೂರು ಜಿಲ್ಲಾಸ್ಪತ್ರೆಯಲ್ಲಿರೋ ಅವ್ಯವಸ್ಥೆಯನ್ನ, ಅಲ್ಲಿ ರೋಗಿಗಳು, ಕುಟುಂಬಸ್ಥರು ಅನುಭವಿಸುತ್ತಿರೋ ಸಂಕಷ್ಟವನ್ನು ಪ್ರಜಾಶಕ್ತಿ ವರದಿ ಮಾಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗ್ತಿದೆ. ಹೌದು ತುಮಕೂರು ಜಿಲ್ಲಾಸ್ಪತ್ರೆಯ ಆವರಣದಲ್ಲಿರೋ ಶವಗಾರಕ್ಕೆ ದಾರಿ ಇಲ್ಲದೇ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿತ್ತು. ಕುಟುಂಬಸ್ಥರು ಶವಗಾರಕ್ಕೆ ಬಾರಲಾಗದೇ ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿಯಲ್ಲಿ ಮಾರ್ಚ್ 13ರಂದು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ದಾರಿ ಯಾವುದಯ್ಯ ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಮಾಡಿತ್ತು. ವರದಿ ಮಾಡಿದ ಬಳಿಕ ಎಚ್ಚೆತ್ತ ಅಧಿಕಾರಿಗಳು ತ್ವರಿತ ಗತಿಯಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ.
ಜಿಲ್ಲಾಸ್ಪತ್ರೆ ಆವರಣದಲ್ಲಿ ಸದ್ಯ ವಿವಿಧ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು, ಶವಗಾರಕ್ಕೆ ರಸ್ತೆಯಿಲ್ಲದೇ ಪರದಾಡುವಂತಾಗಿದೆ. ಇನ್ನು ಆರೋಗ್ಯ ಇಲಾಖೆ ಈ ಶವಗಾರಕ್ಕೆ ಹೊಸ ರಸ್ತೆಯನ್ನ ಮಾಡಿಸ್ತಾ ಇದೆ. ಆದ್ರೆ ಈ ಕಾಮಗಾರಿ ವಿಳಂಬದಿಂದಾಗಿ ಇಲ್ಲಿಗೆ ಬರುವ ಜನರು ಸಮಸ್ಯೆ ಅನುಭವಿ ಸುವಂತಾಗಿತ್ತು. ಈ ಬಗ್ಗೆ ಪ್ರಜಾಶಕ್ತಿ ಟಿವಿಯಲ್ಲಿ ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡಿತ್ತು. ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕಾಮಗಾರಿಗೆ ಚುರುಕು ನೀಡಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸುವ ನಿರೀಕ್ಷೆ ನೀಡಿದ್ದಾರೆ. ಪ್ರಜಾಶಕ್ತಿ ವರದಿ ಬಳಿಕ ಶವಗಾರದ ರಸ್ತೆಯ ಕಾಮಗಾರಿಗೆ ವೇಗ ನೀಡಿದ್ದು, ಸಾರ್ವಜನಿಕರು ಪ್ರಜಾಶಕ್ತಿ ಟಿವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.