ತುಮಕೂರು : ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ರೈತರಿಂದ ಲಗಾಮು

ತುಮಕೂರು : 144 ಸೆಕ್ಷನ್‌ ಹೊರತಾಗಿಯೂ ನಿಟ್ಟೂರಿನಿಂದ ಪಾದಯಾತ್ರೆಯಲ್ಲಿ ಹೊರಟಿದ್ದ ರೈತ ಹೋರಾಟಗಾರರು ಸುಂಕಾಪುರಕ್ಕೆ ಆಗಮಿಸಿ, ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಹೇಮಾವತಿಯ ನೀರನ್ನು ರಾಮನಗರಕ್ಕೆ ತಿರುಗಿಸಲು ನಡೆಯುತ್ತಿದ್ದ ಈ ಯೋಜನೆ ರೈತರ ಬಿಸಿಗೆ ತುತ್ತಾಗಿದ್ದು, ಸ್ಥಳದಲ್ಲೇ ಪ್ರತಿಭಟನೆಯ ರೂಪದಲ್ಲಿ ಕಾಮಗಾರಿಗೆ ಲಗಾಮು ಹಾಕಿದರು.

ಸುಂಕಾಪುರಕ್ಕೆ ಬಂದ ಸಾವಿರಾರು ರೈತರು ಮತ್ತು ಸ್ಥಳೀಯ ಹೋರಾಟಗಾರರು 5 ಜೆಸಿಬಿ ಯಂತ್ರಗಳ ಮೂಲಕ ದೊಡ್ಡ ಪೈಪುಗಳನ್ನು ಉರುಳಿಸಿ ನಾಲೆಯನ್ನು ಮುಚ್ಚಲು ಯತ್ನಿಸಿದರು. ಇನ್ನು ಪ್ರತಿಭಟನೆ ಬಳಿಕ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜೆಸಿಬಿ ಮೂಲಕ ನಾಲೆ ಮುಚ್ಚಿಸುವಾಗ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಕಾಮಗಾರಿಗೆ ಮಣ್ಣು ಹಾಕಿ ರೈತರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ.

ಇನ್ನು ಈ ಯೋಜನೆಯನ್ನು ತಕ್ಷಣ ಹಿಂದಕ್ಕೆ ಕರೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ರೈತರು, ಅವಧಿಯಲ್ಲಿ ಯೋಜನೆ ಹಿಂಪಡೆಯದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews