ಚಿಕ್ಕಮಗಳೂರು : ಪ್ರೀತಿ ಕುರುಡೋ… ಪ್ರೀತಿ ಮಾಯೆಯೋ ಗೊತ್ತಿಲ್ಲ… ಪ್ರೀತಿಸಿ ಮದುವೆ ಆಗಿದ್ದವಳೇ ಗಂಡನ ಪಾಲಿಗೆ ಯಮಳಂತೆ ಕಾಡಿದ್ದಾಳೆ… ಪ್ರೀತಿಸಿ ಮದುವೆ ಆಗಿ ಸುಖ ಸಂಸಾರ ಆಗಬೇಕಿದ್ದ ಕುಟುಂಬ ದುರಂತ ರೀತಿ ಅಂತ್ಯ ಕಂಡಿರೋದು ಮಾತ್ರ ವಿಪರ್ಯಾಸ.. ಹೌದು ಪ್ರೀತಿಸಿ ಮದುವೆ ಆಗಿ ಇಬ್ಬರು ಮಕ್ಕಳು ಆದಮೇಲೆ ಬೇರೊಬ್ಬನೊಂದಿಗೆ ಲವ್ ಆಗಿ.. ಕೊನೆಗೆ ಪ್ರಿಯಕರ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿಕೊಂಡು ಗಂಡನನ್ನೇ ಮುಗಿಸಿರೋ ದುರ್ಘಟನೆಯೊಂದು ಬೆಳಕಿಗೆ ಬಂದಿದೆ../ ಹೆಂಡ್ತಿಯ ಕಿರಾತಕ ಬುದ್ದಿಗೆ ಜನರು ಬೆಚ್ಚಿಬಿದ್ದಿದ್ದಾರೆ…
ಹೌದು ಪ್ರೀತಿಸಿ ಮದುವೆ ಆಗಿ ಇಬ್ಬರು ಮಕ್ಕಳಾದ ಬಳಿಕ ಮತ್ತೊಬ್ಬನೊಂದಿಗೆ ಲವ್ ಆಗಿದ್ದು, ತನ್ನ ಪ್ರೀತಿಗೆ ಅಡ್ಡಿಯಾದ ಗಂಡನನ್ನೇ ಕೊಲೆಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಕರಗುಂದದಲ್ಲಿ ನಡೆದಿದೆ. ಸುಮಾರು 10 ವರ್ಷದ ಹಿಂದೆ ಸುದರ್ಶನ್ ಹಾಗೂ ಕಮಲ ಎಂಬುವವರು ಪ್ರೀತಿಸಿ ಮದುವೆ ಆಗಿದ್ರು. ಇವರಿಬ್ಬರ ಪ್ರೀತಿಯ ಪ್ರತೀಕವಾಗಿ ಇಬ್ಬರು ಮುದ್ದಾದ ಮಕ್ಕಳು ಇದ್ದು, ಸುಖ ಸಂಸಾರ ನಡೆಸುತ್ತಿದ್ರು. ಆದ್ರೆ ಹೆಂಡ್ತಿ ಕಮಲಾಗೆ ಅದ್ಯಾಕೆ ಕೆಟ್ಟ ಬುದ್ದಿ ಬಂದಿತೋ ಕಾಣೆ ಕಮಲಾಗೆ ಶಿವರಾಜ್ ಎಂಬುವವನ ಮೇಲೆ ಲವ್ ಅಗಿಬ್ಬಿಟ್ಟಿದೆ.
ಕಮಲಾ ಹಾಗೂ ಶಿವರಾಜ್ ಪ್ರೀತಿಯ ವಿಚಾರ ಗಂಡ ಸುದರ್ಶನ್ಗೆ ತಿಳಿದಿತ್ತು. ಆಗಾಗ್ಗಾ ಸುದರ್ಶನ್ ಹಾಗೂ ಕಮಲಾ ನಡುವೆ ಗಲಾಟೆ ಆಗ್ತಾ ಇತ್ತು.. ತನ್ನ ಪ್ರೀತಿಗೆ ಗಂಡನೇ ವಿಲನ್ ಆಗಿಬಿಟ್ಟ ಅಂತಾ ಕಮಲ್ ತನ್ನ ಲವರ್ ಶಿವರಾಜ್ಗೆ ಗಂಡನನ್ನು ಕೊಲ್ಲಲು ಸುಫಾರಿ ನೀಡಿ, ಮದ್ಯದಲ್ಲಿ ನಿದ್ದೆ ಮಾತ್ರೆ ಹಾಕಿ ಗಂಡ ಸುದರ್ಶನ್ನ ಕತ್ತು ಹಿಸುಕಿ ಸಾಯಿಸಿಬಿಟ್ಟಿದ್ದಾಳೆ. ಗಂಡನ ಮೃತದೇಹವನ್ನು ಕುರಗುಂದ ಬಸ್ ಸ್ಟ್ಯಾಂಡ್ನಲ್ಲಿ ಬಿಸಾಕಿ ಹೋಗಿದ್ದಾಳೆ. ಗಂಡನ ಸಾಯಿಸಿ ನಾಟಕ ಆಡಿದ ಪತ್ನಿ ಕಮಲಾ ತನ್ನ ಗಂಡ ಸತ್ತುಹೋಗಿದ್ದಾನೆ ಅಂತಾ ಖುದ್ದು ತಾನೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಎನ್.ಆರ್ ಪುರ ಪೊಲೀಸರು ವಿಚಾರಣೆ ಆರಂಭಿಸಿದಾಗ ಅಸಲಿ ಕಹಾನಿ ತಿಳಿದು ಬಂದಿದ್ದು, ಲವರ್ ಜೊತೆ ಸೇರಿ ಗಂಡನನ್ನ ಹೆಂಡ್ತಿ ಕಮಲಾಳೇ ಸಾಯಿಸಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಈ ಸಂಬಂಧ ಹೆಂಡ್ತಿ ಕಮಲಾ ಸೇರಿ ಮೂವರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಗಂಡ ಸುದರ್ಶನ್ ಸಾವಿನ ಮನೆಗೆ ಸೇರಿದ್ರೆ, ಹೆಂಡ್ತಿ ಕಮಲಾ ಜೈಲು ಪಾಲಾಗಿದ್ರೆ, ಏನೂ ಅರಿಯದ ಮಕ್ಕಳು ಅಪ್ಪ- ಅಮ್ಮನನ್ನು ಕಳೆದುಕೊಂಡು ಅನಾಥರಾಗಿದ್ದು ಸುಂದರ ಸಂಸಾರ ದುರಂತ ಅಂತ್ಯ ಕಂಡಿದ್ದು ಮಾತ್ರ ಬೇಸರದ ಸಂಗತಿ.