ಚಿಕ್ಕಮಗಳೂರು : ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಮನಸ್ಸೋ ಇಚ್ಚೆ 10 ಬಾರಿ ಚಾಕುವಿನಿಂದ ಇರಿದು ಹತ್ಯೆ ಗೈದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರಾ ಚೆಕ್ ಪೋಸ್ಟ್ ಬಳಿ ನಡೆದಿದೆ. 32 ವರ್ಷದ ಅವಿನಾಶ್ ಎಂಬ ವ್ಯಕ್ತಿ ತನ್ನ ಪತ್ನಿ ಕೀರ್ತಿಯನ್ನು (26) ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ತಾಯಿ ಮನೆಯಲ್ಲಿದ್ದ ಕೀರ್ತಿ ಬಟ್ಟೆ ತೊಳೆಯಲು ಹೋಗಿದ್ದಾಗ, ಸ್ಥಳಕ್ಕೆ ಬಂದ ಆರೋಪಿ ಪತ್ನಿ ಜೊತೆ ಜಗಳ ನಡೆಸಿ ನಂತರ ಆಕೆಗೆ ಮನಸ್ಸೋ ಇಚ್ಚೆ 10 ಬಾರಿ ಚಾಕು ಇರಿದಿದ್ದಾನೆ, ಕೂಡಲೇ ಆಕೆ ಆತನನ್ನ ನೂಕಿ ರಸ್ತೆಗೆ ಬಂದು ಕೂಗಾಡಿದಾಗ ಮನೆಯವರು ಸ್ಥಳೀಯರು ಆಕೆಯನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ
ಇವರಿಬ್ಬರೂ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದೆ. ಇಬ್ಬರ ಮಧ್ಯೆ ಜಗಳ ನಡೆದಿದ್ದು, ಆತ ಚಾಕುವಿನಿಂದ 10 ಬಾರಿ ಇರಿದು ಹತ್ಯೆ ಮಾಡಿ ಆರೋಪಿ ಅವಿನಾಶ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಕಳೆದ ವಾರ ಇಬ್ಬರೂ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ರೂ, ಈ ವೇಳೆ ಇಬ್ಬರು ಚೆನ್ನಾಗಿಯೇ ಇದ್ದರು, ಅದ್ರೆ ಅವಿನಾಶ್ ಆಕೆಗೆ ನಿರಂತರವಾಗಿ "ಡಿವೋರ್ಸ್ ನೀಡು" ಎಂದು ಕಿರುಕುಳ ನೀಡುತ್ತಿದ್ದ ಅಂತ ಮೃತಳ ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ಕೊಲೆಗೆ ಅವಿನಾಶ್ ಅಕ್ಕನೇ ಕಾರಣ ಎಂದು ಕೀರ್ತಿ ಪೋಷಕರು ಆರೋಪಿಸಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.