PAVAGDA NEWS : ಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿ [KENCHAMMANAHALLI] ಗ್ರಾಮದ ಬಳಿ ಇರುವ ತುಂಗಭದ್ರಾ ನೀರಿನ ಶೇಖರಣೆ ಘಟಕ ಹಾಗೂ ಜೆ.ಜೆ.ಎಂ [JJM] ಕಾಮಗಾರಿಯನ್ನು ಕೇಂದ್ರ ತಂಡ ಭೇಟಿ ನೀಡಿ ವೀಕ್ಷಣೆ ಮಾಡಿದ್ರು. ಈ ವೇಳೆ ಕೇಂದ್ರ ತಂಡದ ಮುಖ್ಯ ಇಂಜಿನಿಯರ್ ಪ್ರೀತಮ್ ದತ್ತ ಮತ್ತು ಐಎಎಸ್ ಅಧಿಕಾರಿ ಸೌದತ್ತ ಮುಖರ್ಜಿ ಅಧಿಕಾರಿಗಳಿಂದ ಕಾಮಗಾರಿಯ ಸಂಪೂರ್ಣ ಮಾಹಿತಿ ಪಡೆದುಕೊಂಡ್ರು
ಜಿಲ್ಲಾ ಪಂಚಾಯಿತಿ CEO ಪ್ರಭು ಮಾತನಾಡಿ, ಈಗಾಗಲೇ ತಾಲೂಕಿನಾದ್ಯಂತ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣ ಪುಟ್ಟ ಕಾಮಗಾರಿಗಳು ರಿಪೇರಿ ಹಂತದಲ್ಲಿವೆ. ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಗಿಸಿ, ನಂತರ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಕರೆಸಿ ಉದ್ಘಾಟನೆ ಗೊಳಿಸಲಿದ್ದೇವೆ. ಯಾವುದೇ ಕಾರಣಕ್ಕೂ ಕೂಲಿ ಆಳುಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಕಾಮಗಾರಿ ಮಾಡಲು ಈ ಭಾಗದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ.
ಮುಂದುವರೆದು ಮಾತನಾಡಿದ ಅವರು, ಇಓಗಳು ನೆಮ್ಮದಿಯಿಂದ ಕೆಲಸ ಮಾಡಬೇಕಾದರೆ, ಮುಂದಿನ ದಿನಗಳಲ್ಲಿ ಸಮಸ್ಯೆಗಳು ಇದ್ದರೆ ಸರಿಪಡಿಸಿ ಕೊಳ್ಳಿ. ಇಲ್ಲವಾದರೆ ನೇರವಾಗಿ ಸಮಸ್ಯೆ ಅನುಭವಿಸಬೇಕಾಗುತ್ತದೆ. ಪ್ರತಿಯೊಂದು ಖರ್ಚು-ವೆಚ್ಚದ ಬಗ್ಗೆ ಕೌಂಟರ್ ಇದ್ದರೆ ಮಾತ್ರ ಬಿಲ್ಲುಗಳು ಪಾವತಿ ಆಗುತ್ತದೆ. ಇನ್ನು ಒಂದು ವಾರ, ತಿಂಗಳ ಒಳಗೆ ಕೆ-2 ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ ಎಂದರು.
ಇದೇ ವೇಳೆ ಎಂಟು ಪಂಚಾಯತಿಗಳಾದ ತಿರುಮಣಿ. ರೂಪ್ಪ. ರಾಜವಂತಿ. ಸಿ.ಕೆ.ಪುರ. ಪೂನ್ನಸಮುದ್ರ, ಕ್ವಾಟಗುಡ್ಡ, ವಳ್ಳೂರು ಅವ್ಯವಹಾರದ ಬಗ್ಗೆ ಹನುಮಂತರಾಯಪ್ಪ ಸಿಎಸ್ ರವರ ಗಮನಕ್ಕೆ ತಂದಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತನಿಖೆ ಮಾಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಾನಕೀರಾಮ್, ಸಹಾಯಕ ನಿರ್ದೇಶಕರು ಮಾರುತಿ ಹಾಗೂ PRED AEE ಕಾವ್ಯ, AE ಬಸವಲಿಂಗಪ್ಪ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ರು.