BELAGAVI : ಶಾಲೆಗೆ ಹೋದ ಮೊದಲ ದಿನವೇ ಬಾಲಕ ಸಾವು

BELAGAVI NEWS : ಶಾಲೆಗೆ ಅಕ್ಕನ ಜೊತೆಯಲ್ಲಿ ಮೊದಲ ದಿನ ಹೆಜ್ಜೆಯಿಟ್ಟಿದ್ದ ಐದು ವರ್ಷದ ಮುತ್ತುರಾಜ್ [MUTTU RAJ] ಮುಗಳ ಖೋಡ ಎಂಬ ಪುಟ್ಟ ಬಾಲಕ ರಸ್ತೆಯ ಅಪಘಾತದಲ್ಲಿ [ROAD ACCIDENT] ದುರ್ಮರಣ ಹೊಂದಿರುವ ಘಟನೆ ನೆನ್ನೆ ಬೆಳಗಾವಿ ಜಿಲ್ಲೆಯ  ರಾಯಭಾಗ ತಾಲೂಕಿನ ಕಂಕನವಾಡಿ [KANKANAVADI] ಹೊರವಲಯದಲ್ಲಿ ನಡೆದಿದೆ.

ಈ ದುರ್ಘಟನೆ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಸಂಜೆ ಸಂಭವಿಸಿದ್ದು, ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಬಾಲಕ ಮೊದಲು ಬೈಕ್ ಡಿಕ್ಕಿಗೆ ಗುರಿಯಾದ ಬಳಿಕ ಇನ್ನೊಂದು ವಾಹನ ಆತನ ಮೇಲೆ ಹರಿದಿದೆ. ಈ ಪರಿಣಾಮ ಮುತ್ತುರಾಜ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

ಮುತ್ತುರಾಜ್ ನೆನ್ನೆ ನಾಗನೂರ ಪಟ್ಟಣದ ಸಮರ್ಥ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಪ್ರಥಮ ದಿನ ಹಾಜರಾಗಿದ್ದ. ಸಂಜೆ ವೇಳೆಗೆ ಶಾಲಾ ವಾಹನ ಮನೆ ಸಮೀಪದ ಹೆದ್ದಾರಿಯಲ್ಲಿ ನಿಲ್ಲಿಸಿ ವಿದ್ಯಾರ್ಥಿಗಳನ್ನು ಇಳಿಸುತ್ತಿದ್ದಾಗ, ಮುತ್ತುರಾಜ್ ರಸ್ತೆಯನ್ನು ದಾಟುತ್ತಿರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಇನ್ನು ಬೈಕ್ ಸವಾರ ಮತ್ತು ಮತ್ತೊಂದು ವಾಹನದ ಚಾಲಕರು ವಾಹನ ನಿಲ್ಲಿಸದೇ ಪರಾರಿಯಾಗಿದ್ದಾರೆ. ಘಟನೆ ಬಳಿಕ ಶಾಲಾ ವಾಹನದ ಚಾಲಕ ಕೂಡ ಸ್ಥಳವನ್ನು ಬಿಟ್ಟು ಪರಾರಿಯಾಗಿದ್ದಾನೆ. ಇನ್ನು ರಾಯಭಾಗ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಮಕ್ಕಳೊಂದಿಗೆ ಪಾಠ ಆರಂಭವಾಗೋ ಮೊದಲ ದಿನವೇ ಮಗು ಜೀವಂತವಾಗಿ ಮನೆಗೆ ಮರಳಿ ಬಾರದ ನೋವಿನಲ್ಲಿ ಕುಟುಂಬಸ್ಥರು ಶೋಕದಲ್ಲಿ ಮುಳುಗಿದ್ದಾರೆ. 

Author:

...
Keerthana J

Copy Editor

prajashakthi tv

share
No Reviews