ಬೀದರ್‌ : ತಂಗಿಯನ್ನು ಪ್ರೀತಿಸಿದ್ದಕ್ಕಾಗಿ ಯುವಕನ ಬರ್ಬರ ಹತ್ಯೆ..!

ಕೊಲೆಯಾದ ಯುವಕ ಪ್ರಶಾಂತ್‌ ಬಿರಾದರ್‌ (25)
ಕೊಲೆಯಾದ ಯುವಕ ಪ್ರಶಾಂತ್‌ ಬಿರಾದರ್‌ (25)
ಬೀದರ್‌

ಬೀದರ್‌ :

ತಂಗಿಯನ್ನು ಪ್ರೀತಿಸಿದ್ದಕ್ಕಾಗಿ ಯುವಕನನ್ನು ಹತ್ಯೆ ಮಾಡಿರುವಂತಹ ಘಟನೆ ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಿರಗೂಡಿ ಗ್ರಾಮದಲ್ಲಿ ನಡೆದಿದೆ. ನಿರಗೂಡಿ ಗ್ರಾಮದ 25 ವರ್ಷದ ಪ್ರಶಾಂತ್‌ ಬಿರಾದರ್‌ ಮೃತ ದುರ್ದೈವಿಯಾಗಿದ್ದಾರೆ.

ಮೃತ ಯುವಕ ಹಾಗೂ ಆರೋಪಿಗಳ ಸಹೋದರಿ ನಡುವೆ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಈ ವಿಚಾರವಾಗಿ ಮೃತ ಪ್ರಶಾಂತ್‌ ಹಾಗೂ ಅರೋಪಿಗಳ ನಡುವೆ  ಗಲಾಟೆಯಾಗಿದ್ದು, ಗಲಾಟೆ ವೇಳೆ ಪ್ರಶಾಂತ್‌ ತಲೆ ಮೇಲೆ ಕಲ್ಲು ಹಾಕಿ ಸಹೋದರರು ಬರ್ಬರವಾಗಿ ಯುವಕನನ್ನು ಹತ್ಯೆಗೈದಿದ್ದಾರೆ. ಇನ್ನು ಯುವಕನ ಮೃತದೇಹವನ್ನು ಬಸವಕಲ್ಯಾಣ ಶವಗಾರಕ್ಕೆ ರವಾನಿಸಲಾಗಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಡಿವೈಎಸ್ಪಿ ನ್ಯಾಮೇಗೌಡ ಹಾಗೂ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Author:

...
Editor

ManyaSoft Admin

share
No Reviews