BANAGALORE : RCB ತಂಡದಕ್ಕೆ ಶುಭ ಹಾರೈಸಿದ D.K ಶಿವಕುಮಾರ್‌

BANGALORE : IPL 2025ರ ಬಹು ನಿರೀಕ್ಷಿತ FINAL ಪಂದ್ಯದಲ್ಲಿ ROYAL CHALLENGERS BANGALORE ತಂಡ PUNJAB KINGS ವಿರುದ್ಧ ಅಖಾಡಕ್ಕಿಳಿಯಲು ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ [ D.K SHIVAKUMAR] RCB ಗೆ ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು RCB JERSEY ಧರಿಸಿ “ಈ ದಿನಕ್ಕಾಗಿ ಕಳೆದ 18 ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದೇವೆ. ಆರ್‌ಸಿಬಿ ಈ ವರ್ಷ ಕೊನೆಗೂ ಫೈನಲ್ ತಲುಪಿದೆ. ಇಡೀ ರಾಜ್ಯವನ್ನೇ ಪ್ರೀತಿಸುತ್ತಿರುವ ಈ ತಂಡ ಇಂದು ಟ್ರೋಫಿ ಗೆದ್ದು ಬರಲಿ ಎಂದು ನಾವು ಎಲ್ಲರೂ ಹಾರೈಸುತ್ತೇವೆ,” ಎಂದು ಹೇಳಿದ್ದಾರೆ.

ಆರ್‌ಸಿಬಿ ಒಂದು ಜೆರ್ಸಿ ಅಲ್ಲ, ಅದು ಮಿಲಿಯನ್ ಕನಸುಗಳ ಪ್ರತೀಕ. ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ. ಕರ್ನಾಟಕ ಸರ್ಕಾರವೂ ನಿಮ್ಮ ಬೆಂಬಲದಲ್ಲಿದೆ. ಹುಡುಗರೇ, ಕಪ್ ಗೆದ್ದು ತವರಿಗೆ ಬನ್ನಿ ಎಂದು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಅಹಮದಾಬಾದ್‌ನ NARENDRA MODI STADIUM ನಲ್ಲಿ ಇಂದು ನಡೆಯಲಿರುವ ಈ ಐತಿಹಾಸಿಕ ಪಂದ್ಯದಲ್ಲಿ RCB ದಿಟ್ಟ ಹೆಜ್ಜೆ ಇಟ್ಟರೆ, 18 ವರ್ಷದ TROPHY ಕನಸು ಇಂದು ನಿಜವಾಗಬಹುದು. ಈ ಬಾರಿ ಆರ್‌ಸಿಬಿ ಆಟಗಾರರ ಹೋರಾಟ ಹಾಗೂ ತಂಡದ ಏಕತೆ ಅಭಿಮಾನಿಗಳಲ್ಲಿ ಭರವಸೆ ತುಂಬಿದೆ.

Author:

...
Keerthana J

Copy Editor

prajashakthi tv

share
No Reviews