BANGALORE NEWS : ಗಾಳಿ ಇಲ್ಲ, ಮಳೆ ಇಲ್ಲದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಿ ನಿವಾಸದ ಸಮೀಪ ಬೃಹತ್ ಮರವೊಂದು ಅಲ್ಪದೂರಕ್ಕೆ ಧರೆಗುರುಳಿರುವ ಘಟನೆ ಸಂಭವಿಸಿದೆ. ಈ ಅಸಮಾನ್ಯ ಘಟನೆ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಮನೆಮಾಡಿದೆ.
ಮರ ಬಿದ್ದ ಪರಿಣಾಮ ಶಿವಾನಂದ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದ ಟಿಟಿ (TT) ವಾಹನ ಮತ್ತು ಇನ್ನೋವಾ ಕಾರಿನ ಮೇಲೆ ಮರದ ಕೊಂಬೆಗಳು ಬಿದ್ದಿವೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ವಾಹನಗಳಿಗೆ ಹಾನಿಯಾಗಿದೆ.
ಇನ್ನು ಘಟನಾ ಸ್ಥಳಕ್ಕೆ ತಕ್ಷಣವೇ ಪೊಲೀಸರು ಸಿಬ್ಬಂದಿ ಧಾವಿಸಿ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದು, ಮರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ವೇಳೆ ಶಿವಾನಂದ ಸರ್ಕಲ್ ಬಳಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದೆ.