ಚಿಕ್ಕಬಳ್ಳಾಪುರ:
ಕಂಟೈನರ್ನಲ್ಲಿ ಸಾಗಿಸುತ್ತಿದ್ದ 3 ಕೋಟಿ ಮೌಲ್ಯದ ಮೊಬೈಲ್ಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 7 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಬಂಧಿತರಿಂದ ಸುಮಾರು 56 ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಇಮ್ರಾನ್, ಮಹಮ್ಮದ್ ಮುಸ್ತಫಾ , ಭುರ್ರ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ, ಯುಸಾಫ್ ಖಾನ್ ಎನ್ನಲಾಗಿದೆ. ದೆಹಲಿಯ ನೋಯ್ಡಾದಿಂದ ಬೆಂಗಳೂರಿನಗೆ ಕಂಟೇನರ್ ಮೂಲಕ ಸಾಗಿಸುತ್ತಿದ್ದ ವೇಳೆ 3 ಕೋಟಿ ಮೌಲ್ಯದ ಮೊಬೈಲ್ಗಳನ್ನು ಖದೀಮರು ಕಳ್ಳತನ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಅಲರ್ಟ್ ಆಗಿ ಮಿಂಚಿನ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 22, 2024 ರಂದು ಕಂಟೇನರ್ ಡ್ರೈವರ್ ಚಿಕ್ಕಬಳ್ಳಾಪುರದ ರೆಡ್ಡಿಗೊಲ್ಲಾರಹಳ್ಳಿ ಬಳಿಯ ಹೆಚ್.ಪಿ.ಡಾಬಾ ಬಳಿ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಗಿದ್ದ. ಇದಕ್ಕೂ ಮುನ್ನವೇ ಕಂಟೇರ್ ಚಾಲಕ ತನ್ನ ಸಹಚರರೊಂದಿಗೆ ಸೇರಿ ದರೋಡೆ ಮಾಡಲು ಸ್ಕೇಚ್ ಹಾಕಿದ್ದನಂತೆ. ಅದರಂತೆ ನೋಯ್ಡಾದಿಂದ ಬೆಂಗಳೂರಿಗೆ ಕಂಟೇನರ್ ಬರುವ ಮಾಹಿತಿ ನೀಡಿದ್ದನಂತೆ. ಬೇರೆಡೆ ಮಾಲನ್ನು ಸಾಗಿಸಿ ಚಿಕ್ಕಬಳ್ಳಾಪುರ ರಸ್ತೆಯ ರೆಡ್ಡಿಗೊಲ್ಲಾರಹಳ್ಳಿ ಬಳಿಯ ಡಾಬಾ ಮುಂದೆ ಕಂಟೇನರ್ ಬಿಟ್ಟು ಪರಾರಿಯಾಗಿದ್ದ. ಕಂಟೇನರ್ಲ್ಲಿ ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಬೆಲೆ ಬಾಳುವ 5140 ಮೊಬೈಲ್ಗಳನ್ನು ಕಳವು ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಫ್ ಸೀಡ್ ಕೊರಿಯರ್ ಲಿಮಿಟೆಡ್ ಕಂಪನಿಯ ಅಧಿಕಾರಿಗಳು ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ನಯಾಜ್ ಬೇಗ್ ಕಾರ್ಯಪ್ರೌವೃತ್ತರಾಗಿ ಡಿ.10, 2024 ರಂದು ಕಂಟೇನರ್ ಚಾಲಕ ರಾಹುಲ್ನನ್ನು ಬಂಧಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು 29.1.2025 ರಂದು ಚಿಕ್ಕಬಳ್ಳಾಪುರದ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆಯನ್ನು ಚುರುಕುಗೊಳಿಸಿದ ಡಿವೈಎಸ್ಪಿ ರವಿಕುಮಾರ್ ಕೆ.ವೈ, ಇನ್ಸ್ಪೆಕ್ಟರ್ ಸೂರ್ಯ ಪ್ರಕಾಶ್ ನೇತೃತ್ವದ ತನಿಖಾ ತಂಡ 7 ಆರೋಪಿಗಳನ್ನು ಬಂಧಿಸಿ, ಕಳವು ಮಾಡಲಾಗಿದ್ದ ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಪ್ರತಿ ರಾಜ್ಯಗಳಲ್ಲಿ 300 ರಿಂದ 400 ಮೊಬೈಲ್ಗಳನ್ನು ಮಾರಾಟ ಮಾಡಿದ್ದು, IMEI ನಂಬರ್ ಆಧಾರದ ಮೇಲೆ ಮೊಬೈಲ್ಗಳನ್ನ ಬ್ಲಾಕ್ ಮಾಡಲಾಗುತ್ತಿದೆ ಎಂದು ಪೊಲೀಸರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.