CHIKKAMAGALURU : ಟ್ರಕ್ಕಿಂಗ್ ವೇಳೆ ಕಾಡಿನಲ್ಲಿ ನಾಪತ್ತೆಯಾದ 11 ವಿದ್ಯಾರ್ಥಿಗಳು | 6 ಗಂಟೆ ಬಳಿಕ ಪತ್ತೆ

CHIKKAMAGALURU NEWS :ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗದ ಕಾಡಿನಲ್ಲಿ ದಾರಿ ತಪ್ಪಿದ 11 ವಿದ್ಯಾರ್ಥಿಗಳನ್ನು ಮಧ್ಯರಾತ್ರಿ 2 ಗಂಟೆವರೆಗೆ ನಡೆಸಿದ ರಕ್ಷಣಾ ಕಾರ್ಯಾಚರಣೆ ನಂತರ ಸುರಕ್ಷಿತವಾಗಿ ಪತ್ತೆ ಹಚ್ಚಲಾಗಿದೆ. ಚಾರಣಕ್ಕೆ [TREKKING] ಬಂದಿದ್ದ ಈ ವಿದ್ಯಾರ್ಥಿಗಳು ಕಾಡಿನೊಳಗೆ ದಾರಿ ತಪ್ಪಿ ಪರದಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು ಮತ್ತು 5 ಹುಡುಗಿಯರು, ಒಟ್ಟು 10 ವಿದ್ಯಾರ್ಥಿಗಳು ಹಾಗೂ ಅವರ ಜೊತೆ ಡ್ರೈವರ್ ಸೇರಿ 11 ಮಂದಿ, ಬಲ್ಲಾಳರಾಯನ ದುರ್ಗ ಪ್ರವಾಸಿ ತಾಣಕ್ಕೆ ಟ್ರೆಕ್ಕಿಂಗ್‌ಗೆ ಬಂದಿದ್ದರು. ಟಿಕೆಟ್ ಬುಕ್ ಮಾಡಿಕೊಂಡು ಬಳ್ಳಾರೆಯ ಪ್ರವೇಶ ಬದಲು, ಮಂಗಳೂರಿನ ಬಂಡಾಜೆ ಮಾರ್ಗವಾಗಿ TRKKING ಆರಂಭಿಸಿದ ಈ ತಂಡ, ಕಾಡಿನಲ್ಲಿ ದಾರಿ ತಪ್ಪಿ ನೆರಳಿನ ಕಪ್ಪು ಕತ್ತಲಿನಲ್ಲಿ ಪರದಾಡುತ್ತಿದ್ದರು.

ಇನ್ನು ವಿಷಯ ತಿಳಿದ ಕೂಡಲೇ, ಮೂಡಿಗೆರೆ ತಾಲೂಕಿನ ಬಾಳೂರು ಠಾಣೆಯ ಪೊಲೀಸರು ಸ್ಥಳೀಯ ಯುವಕರ ಸಹಕಾರದಿಂದ ಸಂಜೆ ಸಮಯದಿಂದಲೇ ಹುಡುಕಾಟ ಆರಂಭಿಸಿದರು. ಕಲ್ಲು- ಮುಳ್ಳುಗಳಿಂದ ತುಂಬಿದ ದುರ್ಗಮ ಕಾಡುಹಾದಿಯಲ್ಲಿ, ಅಡಚಣೆಗಳಿಗೆ ನಡುವೆಯೂ ಪೊಲೀಸರು ನಿರಂತರ 6 ಗಂಟೆಗಳ ಕಾಲ ಶ್ರಮಿಸಿ ಎಲ್ಲರನ್ನೂ ಪತ್ತೆ ಹಚ್ಚಿದರು. ಮಧ್ಯರಾತ್ರಿ 2 ಗಂಟೆಗೆ, ಎಲ್ಲ 11 ಮಂದಿಯನ್ನು ಸುರಕ್ಷಿತವಾಗಿ ಪತ್ತೆ ಹಚ್ಚಿದ ಪೊಲೀಸರು, ಅವರನ್ನು ಸುರಕ್ಷಿತವಾಗಿ ಗುಡ್ಡದಿಂದ ಕೆಳಗೆ ಕರೆತಂದು ಆಹಾರ ವಿತರಿಸಿ, ಬಳಿಕ ಚಿತ್ರದುರ್ಗಕ್ಕೆ ವಾಪಸ್ ಕಳುಹಿಸಿದರು.

ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಬಾಳೂರು ಪೊಲೀಸ್ ಠಾಣೆಯ ಪಿಎಸ್ಐ ದಿಲೀಪ್ ಮತ್ತು ಅವರ ತಂಡ, ಜೊತೆಗೆ ಕಾರ್ಯದಲ್ಲಿ ಭಾಗಿಯಾಗಿದ ಸ್ಥಳೀಯ ಯುವಕರಿಗೆ ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಧನ್ಯವಾದ ತಿಳಿಸಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews