Mandya ದಲ್ಲಿ ಅಣ್ಣನೇ (Brother) ತನ್ನ ಮಕ್ಕೊಳೊಂದಿಗೆ ಸೇರಿ ತಮ್ಮನನ್ನು 28 ಬಾರಿ ಇರಿದು ಕೊಂದ ಘಟನೆ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ.

Mandya ಜಿಲ್ಲೆಯ ಮಾಯಪ್ಪನಹಳ್ಳಿ ಗ್ರಾಮದಲ್ಲಿ ನಾಲ್ಕು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನನ್ನು ಅವನದೇ ಅಣ್ಣ ಮತ್ತು ಮಕ್ಕಳು ಸೇರಿ 28 ಬಾರಿ ಇರಿದು ಕೊಂದ ಭೀಕರ ಘಟನೆ ನಡೆದಿದೆ. ಈ ಅಮಾನುಷ ಕೃತ್ಯ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ.
ಕೊಲೆಯಾದ ನತದೃಷ್ಟ ವ್ಯಕ್ತಿಯನ್ನು ಯೋಗೇಶ್ (30) ಎಂದು ಗುರುತಿಸಲಾಗಿದೆ. ಯೋಗೇಶ್ನ ಅಣ್ಣ ಲಿಂಗರಾಜು, ಹಾಗೂ ಅವನ ಮಕ್ಕಳು ಭರತ್ ಮತ್ತು ದರ್ಶನ್ ಸೇರಿ ಈ ಕೊಲೆ ನಡೆಸಿದ್ದಾರೆ ಎನ್ನಲಾಗಿದೆ. ಹತ್ಯೆಯ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಲಿಂಗರಾಜು ಮತ್ತು ಯೋಗೇಶ್ ನಡುವೆ ಆಸ್ತಿ ವಿವಾದ ಇತ್ತು ಎಂದು ತಿಳಿದು ಬಂದಿದೆ. ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲೇ ಯೋಗೇಶ್ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನು ಓದಿ : ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ದುರ್ಮರಣ
ಮದುವೆಗೂ ಮುನ್ನವೇ ಮರಣ
ಇದೇ ತಿಂಗಳ 21ರಂದು ಯೋಗೇಶ್ ಮದುವೆ ನಿಗದಿಯಾಗಿತ್ತು. ಮದುವೆ ಆಹ್ವಾನ ಪತ್ರಿಕೆಯಲ್ಲಿ ಅಣ್ಣ ಲಿಂಗರಾಜು ಅವರ ಹೆಸರನ್ನೂ ಸೇರಿಸಿ ಊರಿನವರಿಗೆ ಹಂಚಲಾಗಿತ್ತು. ಆದರೆ ದುರಂತವೆಂದರೆ, ಮದುವೆಗೆ ನಾಲ್ಕು ದಿನಗಳ ಮುನ್ನವೇ ಅದೇ ಅಣ್ಣನಿಂದ ತಮ್ಮನ ಹತ್ಯೆ ನಡೆದಿದೆ.
ಪೊಲೀಸ್ ತನಿಖೆ ಆರಂಭ
ಈ ಕೊಲೆ ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ತಮ್ಮನನ್ನು ಅಣ್ಣನೇ ಕೊಂದಿರುವ ಈ ಘಟನೆ ಗ್ರಾಮದಲ್ಲಿ ತೀವ್ರ ಆಕ್ರೋಶ ಮತ್ತು ಶೋಕವನ್ನುಂಟುಮಾಡಿದೆ. ಮದುವೆಯ ಸಂಭ್ರಮದಲ್ಲಿ ಮುಳುಗಬೇಕಿದ್ದ ಕುಟುಂಬ, ಈಗ ಆಘಾತದಲ್ಲಿ ಮುಳುಗಿದೆ.
ಇದನ್ನು ನೋಡಿ : ರಾಜೀವ್ ಗೌಡ್ ವಿರುದ್ಧ ಕೆಂಡಾಮಂಡಲರಾದ ಸಂಸದ ಕೆ.ಸುಧಾಕರ್




