Pavagada : ಕಂಪನಿಯಲ್ಲಿ ಶಾರ್ಟ್ ಸರ್ಕ್ಯೂಟ್ | ಗಾಯದಿಂದ ಕಾರ್ಮಿಕರ ನರಳಾಟ

PAVAGADA : ಕಂಪನಿಗಳು ಅಂದ ಮೇಲೆ ಕಾರ್ಮಿಕರ ರಕ್ಷಣೆಯ ಜವಾಬ್ದಾರಿ ಸಂಪೂರ್ಣವಾಗಿ ಅವರ ಮೇಲಿರುತ್ತೆ. ಆದರೆ ಕೆಲವೊಮ್ಮೆ ಕಂಪನಿಗಳು ಮಾಡುವ ಸಣ್ಣಪುಟ್ಟ ಯಡವಟ್ಟಿನಿಂದಾಗಿ ದೊಡ್ಡ ದೊಡ್ಡ ಅವಘಡಗಳು ಸಂಭವಿಸುತ್ತವೆ. ಮತ್ತೆ ಕೆಲವೊಮ್ಮೆ ಸಾವು ನೋವುಗಳು ಕೂಡ ಜರುಗುತ್ತಿವೆ. ಈ ಕಾರಣಕ್ಕೆ ಪ್ರತಿ ಕಂಪನಿಯಲ್ಲಿಯೂ ಕಾರ್ಮಿಕರಿಗೆ ಸೆಫ್ಟಿ ಒದಗಿಸಬೇಕೆಂಬ ಕಾನೂನು ಇದ್ದರೂ, ಅದ್ಯಾಕೋ ಕೆಲವು ಕಂಪನಿಗಳು ಇಂದಿಗೂ ನಿರ್ಲಕ್ಷ್ಯ ತೋರುತ್ತಿವೆ. ಇಂತಹದ್ದೆ ಒಂದು ಕಂಪನಿಯ ನಿರ್ಲಕ್ಷ್ಯದಿಂದಾಗಿ ಮೂವರು ಯುವಕರಿಗೆ ಶಾರ್ಟ್‌ ಸರ್ಕ್ಯೂಟ್‌ ಆಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಂಪನಿಯ ನಿರ್ಲಕ್ಷ್ಯದಿಂದಾಗಿ  ಪಾವಗಡ ತಾಲೂಕಿನ ಇಂಟುರಾಯನ ಹಳ್ಳಿ ಸೋಲಾರ್ ಘಟಕದಲ್ಲಿ ಟ್ರೈನಿ ವೃತ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮೂರು ಜನ ಯುವಕರಿಗೆ ಶಾರ್ಟ್ ಸರ್ಕ್ಯೂಟ್ ಆಗಿದೆ. ಇಂಟುರಾಯನಹಳ್ಳಿ ಗ್ರಾಮದಲ್ಲಿ ಇರುವಂತಹ ಇರ್ಕಾನ್‌ ಕಂಪನಿ ಹಾಗೂ ಕೆ ಎಸ್ ಸಿ ಕಂಪನಿಯ ಸೋಲಾರ್ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮೂರು ಯುವಕರಿಗೆ ಸುಮಾರು 50 ರಷ್ಟು ಮೈ ಭಾಗಗಳು ಸುಟ್ಟ ಗಾಯಗಳಾಗಿವೆ. ಇತ್ತ ಮೂವರು ಯುವಕರಿಗೆ ಶಾರ್ಟ್‌ ಸರ್ಕ್ಯೂಟ್‌ ಆದ ತಕ್ಷಣ ಸ್ಥಳದಲ್ಲೇ ಕೆಲಸ ನಿರ್ವಹಿಸುತ್ತಿದ್ದ ಸಹಪಾಟಿ ಗಮನಿಸಿದ್ದಾನೆ.  ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನಿಸಲಾಗಿದೆ.

ಇನ್ನು ಹೊಸದಾಗಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಗೇಂದ್ರ, ಮಹೇಂದ್ರ ಹಾಗೂ ಚೇತನ್ ರೆಡ್ಡಿ ಎಂಬ ಮೂರು ಜನರಿಗೆ ಇಂದು ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಇದಕ್ಕೆ ಇರ್ಕಾನ್ ಕಂಪನಿ ಹಾಗೂ ಕೆಇಸಿ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪ್ಯಾಕ್ಟರಿ, ಕಂಪನಿಗಳಿಗೆ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಎಷ್ಟೇ ಭಾರಿ ಇಲಾಖೆಯ ಅಧಿಕಾರಿಗಳು ತಿಳುವಳಿಕೆ ನೀಡಿದ್ರು. ಕಂಪನಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಈ ಕಾರಣಕ್ಕೆ ಇಂದಿಗೂ ಅದೆಷ್ಟೋ ಕಂಪನಿಗಳಲ್ಲಿ ಸೆಫ್ಟಿ ಅನ್ನೋದು ಮರೀಚಿಕೆಯಾಗಿದ್ದು, ಸಾವು ನೋವುಗಳು ಸಂಭವಿಸುತ್ತಲೆ ಇವೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews