BANGALORE : ಸಿಎಂ, ಡಿಸಿಎಂ ಬಂಧನ ಯಾಕ್ಕಿಲ್ಲ ? | ಜೆಡಿಎಸ್‌

BANGALORE NEWS : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಠಿಣ ಪ್ರತಿಕ್ರಿಯೆ ನೀಡಿದ್ದು, ಈ ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇರವಾಗಿ ಹೊಣೆವಿದ್ಯಂತೆ ಎಂದು ಆರೋಪಿಸಿದೆ.

ಇಂದು ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಜೆಡಿಎಸ್, "ಇದು ಕಾಂಗ್ರೆಸ್ ಸರಕಾರದ ಪ್ರಾಯೋಜಿತ ಕೊಲೆ" ಎಂದು ಆರೋಪಿಸಿದೆ. "ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಂಧಿತರಾಗಬೇಕಾದರೆ, ಇನ್ನೇನು ಸತ್ಯ ಬಾಕಿ?" ಎಂದು ಪ್ರಶ್ನಿಸಿದೆ.

ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆಯುತ್ತಿದ್ದ ಎರಡು ಪ್ಯಾರಲ್ ಕಾರ್ಯಕ್ರಮಗಳು – ವಿಧಾನಸೌಧದ ಮುಂಭಾಗದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು. ಈ ರಾಜಕೀಯ ಪ್ರತಿಷ್ಠೆಯ ಪೈಪೋಟಿಯೇ ಸಾವಿರಾರು ಜನ ಸೇರಿಕೊಂಡ ಪರಿಸ್ಥಿತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಮಹಾದುರಂತಕ್ಕೆ ಕಾರಣವಾಯಿತು ಎಂದು ಜೆಡಿಎಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.

ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿ, "ಅಹಂಕಾರದ ರಾಜಕೀಯದ ಫಲವಾಗಿ ಅಮಾಯಕರು ಬಲಿಯಾದರು. ಸರಕಾರ ತನಗೆ ಬಂದ ಹೊಣೆಗಾರಿಯಿಂದ ಮುಚಿಕೊಳ್ಳಲು ಆರ್‌ಸಿಬಿ ಹಾಗೂ ಕೆಎಸ್‌ಸಿಎ ವಿರುದ್ಧ ದೂರು ದಾಖಲಿಸುತ್ತಿದೆ" ಎಂದು ಆರೋಪಿಸಿದೆ.

 

Author:

...
Keerthana J

Copy Editor

prajashakthi tv

share
No Reviews