TUMAKURU : ನಿರ್ವಹಣೆ ಇಲ್ಲದೆ ಸೊರಗುತ್ತಿವೆ ತುಮಕೂರಿನ ಪಾರ್ಕ್‌ಗಳು

TUMAKURU NEWS : ತುಮಕೂರು ಸ್ಮಾರ್ಟ್ ಸಿಟಿ , ಸ್ವಚ್ಛ ನಗರ ಅಂತಲೇ ಖ್ಯಾತಿ ಪಡೆದುಕೊಂಡಿರುವಂತಹ ಸಿಟಿ, ಇಂತಹ ಸಿಟಿಗೆ ಮತ್ತಷ್ಟು ಮೆರಗು ನೀಡೋಕೆ ಅಂತಾ ಪ್ರತಿಯೊಂದು ಬಡಾವಣೆಯಲ್ಲಿ ಪಾರ್ಕ್‌ಗಳನ್ನು ನಿರ್ಮಿಸಿದ್ರು. ಇತ್ತ ಹೀಗಾಗಲೇ ನಿರ್ಮಿಸಿರುವ ಪಾರ್ಕ್‌ಗಳನ್ನ ಡೆವಲೆಪ್‌ಮೆಂಟ್‌ ಕೂಡ ಮಾಡಿದ್ರು. ಆದ್ರೆ ಅದ್ಯಾಕೋ ನಿರ್ವಹಣೆಯ ಉಸ್ತುವಾರಿ ಒತ್ತುಕೊಂಡಿರುವ ಪಾಲಿಕೆ ನಿರ್ಲಕ್ಷ್ಯವಹಿಸಿದೆ. ಇದೇ ಕಾರಣಕ್ಕೆ ಬಹುತೇಕ ಪಾರ್ಕ್‌ಗಳು ಸ್ವಚ್ಛತೆ ಇಲ್ಲದೆ ಸೊರಗುತ್ತಿವೆ. ಇದೀಗ ಸದಾಶಿವನಗರದ 5 ನೇ ಮುಖ್ಯರಸ್ತೆಯಲ್ಲಿರುವ  ಪಾರ್ಕ್‌ ಅಧಿಕಾರಿಗಳ ಜಾಣಕುರುಡುತನಕ್ಕೆ ಸೊರಗಿ ಹೋಗಿದೆ.

ದಿನನಿತ್ಯ ನೂರಾರು ಜನ ಸ್ವಾಮಿ ವಿವೇಕಾನಂದ ಪಾರ್ಕ್‌ ಗೆ ಬರುತ್ತಾರೆ. ಆದ್ರೆ ಇಲ್ಲಿ ಸ್ವಚ್ಛತೆಯಿಲ್ಲದೆ ಜನರು ಬೇಸರಗೊಂಡಿದ್ದಾರೆ. ಪಾರ್ಕ್ ತುಂಬಾ ಗಿಡಗಳು ಬಳ್ಳಿಗಳು ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿದೆ. ಪಾರ್ಕ್‌ಗೆ ವಾಕಿಂಗ್‌ಗೆ ಬರುವವರಿರಲಿ, ಸ್ಥಳೀಯರು ಓಡಾಡು ವುದಕ್ಕೂ ಭಯಪಡ್ತಾ ಇದಾರೆ. ಪಾರ್ಕ್‌ ಒಳಗೆ ಸ್ವಚ್ಛತೆ ಇಲ್ಲ ಅಂತಾ ಪಾಲಿಕೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿಕೊಂಡ್ರು ಕೂಡ ಗಮನಹರಿಸುತ್ತಿಲ್ಲ ಅಂತ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಅದೇನೇ ಇರಲಿ. ಲಕ್ಷ ಲಕ್ಷ ಹಣ ಖರ್ಚು ಮಾಡಿ ನಿರ್ಮಿಸಿರುವ ಪಾರ್ಕ್‌ಗಳು ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ಇತ್ತ ಅಧಿಕಾರಿಗಳು ಕೂಡ ಸ್ವಚ್ಛತೆ ಕಾಪಾಡುವ ಜವಾಬ್ದಾರಿಯನ್ನು ಮರೆತುಬಿಟ್ಟಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಪಾರ್ಕ್‌ಗಳು ಉಪಯೋಗಕ್ಕೆ ಬರುತ್ತಿಲ್ಲ ಅನ್ನೋದು ಬೇಸರದ ಸಂಗತಿ. 

 

Author:

...
Keerthana J

Copy Editor

prajashakthi tv

share
No Reviews