TUMAKURU NEWS | : ಹೇಮೆಗಾಗಿ ಶಿವಣ್ಣ ಗಾಂಧಿ ಹಾದಿ ,ಸತ್ಯಾಗ್ರಹಕ್ಕೆ ಅಡ್ಡಿಯಾದ ಪೊಲೀಸರು

ಸೊಗಡು ಶಿವಣ್ಣ
ಸೊಗಡು ಶಿವಣ್ಣ
ತುಮಕೂರು

 TUMKUR NEWS | ತುಮಕೂರಿನಲ್ಲಿ ಹೇಮಾವತಿ ಕಿಚ್ಚು ದಿನೇ ದಿನೆ ಜೋರಾಗ್ತಾ ಇದೆ. ನಾವು ಯಾವುದೇ ಕಾರಣಕ್ಕೂ ಮಾಗಡಿಗೆ ಹೇಮೆಯನ್ನು ಕೊಂಡೊಯ್ಯಲು ಬಿಡಲ್ಲ ಎಂದು ಪಟ್ಟು ಹಿಡಿದಿರೋ ಹೋರಾಟಗಾರರು ಮೇ 31 ರಂದು ಗುಬ್ಬಿಯಲ್ಲಿ ತೀವ್ರ ಹೋರಾಟ ಮಾಡುವ ಮೂಲಕ ಗಮನ ಸೆಳೆದಿದ್ರು. ನಿಷೇಧಾಜ್ಞೆ ನಡುವೆಯೂ ಹೋರಾಟದ ಕಹಳೆ ಮೊಳಗಿಸಿದ್ದ ಹೋರಾಟಗಾರರ ಮೇಲೆ ಪೊಲೀಸರು ಎಫ್‌ಐಆರ್‌ ಅಸ್ತ್ರ ಪ್ರಯೋಗಿಸಿದ್ದಲ್ಲದೇ ನಿನ್ನೆ ಕೆಲ ಹೋರಾಟಗಾರರನ್ನು ಬಂಧನ ಕೂಡ ಮಾಡಲಾಗಿತ್ತು. ಹೇಮಾವತಿ ಹೋರಾಟದ ಮುಂಚೂಣಿಯಲ್ಲಿ ಸೊಗಡು ಶಿವಣ್ಣ ದೆಹಲಿಯಲ್ಲಿದ್ದರಿಂದ ಮೊನ್ನೆ ನಡೆದಿದ್ದ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಆದ್ರೆ ಹೋರಾಟದ ಭಾಗವಾಗಿದ್ದ ಸೊಗಡು ಶಿವಣ್ಣ, ಸ್ವಾಮಿಜಿಗಳ ವಿರುದ್ಧ ದಾಖಲಾದ ಎಫ್ಐಆರ್ ವಾಪಾಸ್‌ಗೆ ಹಾಗೂ ಹೇಮಾವತಿ ಕೆನಲ್ ಕಾಮಗಾರಿಗೆ ವಿರೋಧಿಸಿ ಉಪವಾಸ ಸತ್ಯಾಗ್ರಕ್ಕೆ ಮುಂದಾದ್ರು. ಇಂದು ಏಕಾಏಕಿ ಡಿಸಿ ಕಚೇರಿಗೆ ಚಾಪೆ, ದಿಂಬು, ಬೆಡ್‌ಶೀಟ್‌ ಸಮೇತ ಬಂದು ಉಪವಾಸ ಸತ್ಯಾಗ್ರಹ ಕೈಗೊಂಡ್ರು.


 ನಗರದ ಡಿಸಿ ಕಚೇರಿಯ ಒಳಾಂಗಣದಲ್ಲಿ ಚಾಪೆಯನ್ನು ಹಾಸಿ, ಕೂತು ಸೊಗಡು ಶಿವಣ್ಣ ಸತ್ಯಾಗ್ರಹ ಆರಂಭಿಸಿದ್ರು. ಅಲ್ಲಿಯೇ ಮಲಗಿ ಹೋರಾಟ ನಡೆಸಿ, ಹೇಮಾವತಿ ಹೋರಾಟಗಾರರ ಮೇಲೆ ಹಾಕಿರುವ ಕೇಸ್ ಹಿಂಪಡೆಯುವಂತೆ ಹಾಗೂ ಮಠಾಧೀಶರನ್ನ ಬಂಧಿಸದಂತೆ ಆಗ್ರಹಿಸಿದ್ರು. ಈ ವೇಳೆ ಮಾತನಾಡಿದ ಅವರು, ಸ್ವಾಮೀಜಿಗಳ ವಿರುದ್ಧ ಎಫ್‌ಐಆರ್‌ ಹಾಕಿರುದು ಅತ್ಯಂತ ಖಂಡನೀಯ. ನಮ್ಮ ಜಿಲ್ಲೆಯಲ್ಲಿ 40 ಕ್ಕೂ ಹೆಚ್ಚು ಮಠಗಳಿವೆ. ಸ್ವಾಮೀಜಿಗಳು ನೀರಿಗಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಸರಿಯಲ್ಲ. ಒಂದು ವೇಳೆ ನನ್ನ ಪ್ರತಿಭಟನೆಯನ್ನು ತಡೆಯಲು ಪೊಲೀಸರು ಮುಂದಾದ್ರೆ ವಿಷ ಕುಡಿಯುತ್ತೇನೆ ಅಂತ ಆಕ್ರೋಶ ಹೊರಹಾಕಿದ್ರು.

 

 ಇನ್ನು ಸೊಗಡು ಶಿವಣ್ಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಸ್ಥಳಕ್ಕೆ ಬಂದ ಪೊಲೀಸರು, ಸತ್ಯಾಗ್ರಹಕ್ಕೆ ಅಡ್ಡಿ ಪಡಿಸಿದ್ರು. ವೈದ್ಯರು ಆಗಮಿಸಿ ಸೊಗಡು ಶಿವಣ್ಣರ ಆರೋಗ್ಯ ತಪಾಸಣೆ ನಡೆಸಿದ್ರು. ಇದೇ ವೇಳೆ ಅಡಿಷನಲ್ ಎಸ್ ಪಿ ಪುರುಷೋತ್ತಮ್ ಹಾಗೂ ಪೊಲೀಸರು ಆರೋಗ್ಯ ನೆಪವೊಡ್ಡಿ ಬಲವಂತವಾಗಿ ಸೊಗಡು ಶಿವಣ್ಣರನ್ನ ಜಿಲ್ಲಾಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿ, ಸತ್ಯಾಗ್ರಹ ಕೈಬಿಡುವಂತೆ ಮನವೊಲಿಕೆ ಮಾಡಿದ್ರು. ಪಟ್ಟು ಬಿಡದ ಸೊಗಡು ಶಿವಣ್ಣರನ್ನು ಎತ್ತಿಕೊಂಡೇ ಬಂದ ಪೊಲೀಸರು ಮನೆ ಒಳಗೆ ಬಿಡಲು ಯತ್ನಿಸಿದ್ರು. ಆದ್ರೆ ನಾನು ಪ್ರಾಣ ಬಿಟ್ಟೇನು ಹೋರಾಟ ಬಿಡಲ್ಲ ಎಂದು ಮನೆ ಬಾಗಿಲ ಮುಂದೆಯೇ ಕೂತು ಪ್ರತಿಭಟನೆಗೆ ಮುಂದಾದ್ರು. ಈ ವೇಳೆ ಪೊಲೀಸರು ಅದೆಷ್ಟೇ ಮನವೊಲಿಕೆಗೆ ಪ್ರಯತ್ನ ಮಾಡಿದ್ರು ಬಗ್ಗದ ಸೊಗಡು ಶಿವಣ್ಣ, ನಾನು ಒಂದು ಹನಿ ನೀರು ಕೂಡ ಮುಟ್ಟಲ್ಲ ಎಂದು ಹಠ ಹಿಡಿದು ಕೂತಿದ್ರು.

 

ಇದಾದ ಬಳಿಕ ಮನೆಯಿಂದ ಹೊರ ಬಂದು ಬೆಂಬಲಿಗರೊಂದಿಗೆ ಡಿಸಿ ಕಚೇರಿವರೆಗೂ ಪಾದಯಾತ್ರೆ ಮಾಡಿಕೊಂಡು ಬಂದ ಸೊಗಡು ಶಿವಣ್ಣ, ಡಿಸಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಕೂತು ಮತ್ತೆ ಪ್ರತಿಭಟನೆ ಮಾಡಲು ಮುಂದಾದ್ರು. ಪೊಲೀಸರು ಪ್ರತಿಭಟನೆ ಕೈಬಿಡಿ ಎಂದು ಮನವೊಲಿಸಿದ್ರು. ಪಟ್ಟು ಬಿಡದ ಸೊಗಡು ಶಿವಣ್ಣ ಪ್ರತಿಭಟನೆ ಮುಂದುವರೆಸಿದ್ರು. ಬಳಿಕ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಸೊಗಡು ಶಿವಣ್ಣ ಹಾಗೂ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದ್ರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೇಮಾವತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕುಣಿಗಲ್‌ಗೆ ಮಾತ್ರ ನೀರು ಕೊಂಡೊಯ್ಯುತ್ತಿರೋದು ಹಾಗಾಗಿ ಕಾಮಾಗಾರಿ ನಿಲ್ಲಿಸಲ್ಲ ಅಂತಿರೋ ಸರ್ಕಾರ ಮತ್ತೊಂದ್ಕಡೆ ಕಾಮಗಾರಿ ಕೈಗೊಂಡ್ರೆ ಉಗ್ರ ಹೋರಾಟ ಮಾಡ್ತೀವಿ ಅಂತಾ ಹೋರಾಟಗಾರರು ಎಚ್ಚರಿಕೆ ನೀಡ್ತಾ ಇದ್ದು, ಮುಂದಿನ ದಿನಗಳಲ್ಲಿ ಹೇಮಾವತಿ ಕಿಚ್ಚು ಯಾವ ಮಟ್ಟಕ್ಕೇರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Author:

...
N Meghana Prashanth

Anchor

prajashakthi tv

share
No Reviews