TUMAKURU NEWS | ತುಮಕೂರಿನಲ್ಲಿ ಹೋರಾಟಗಾರರ ಮೇಲೆ FIR, ಗುಬ್ಬಿ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟ ವಿಜಯೇಂದ್ರ

B Y ವಿಜಯೇಂದ್ರ
B Y ವಿಜಯೇಂದ್ರ
ತುಮಕೂರು

ತುಮಕೂರಿನಲ್ಲಿ ಹೇಮಾವತಿ ಹೋರಾಟದ ಕಿಚ್ಚು ಹೆಚ್ಚಾಗಿದ್ದು ,ಒಂದು ಕಡೆ ನಾಯಕರು ಕಾಮಗಾರಿ ನಿಲ್ಲಿಸಲು ಪಟ್ಟು ಬಿಡದೆ ಹೋರಾಟನಡೆಸುತ್ತಿದ್ರೆ. ಇತ್ತ ಮಠಾಧೀಶರು ಸೇರಿದಂತೆ 13 ಜನರ ಮೇಲೆಎಫ್‌ಐಆರ್‌ ದಾಖಲಾಗಿದೆ. ಹೋರಾಟಗಾರರ ಮೇಲೆ ಎಫ್‌ಐಆರ್‌ ದಾಖಲಾದ ಬೆನ್ನಲ್ಲೆ ಇಂದು ಬಿಜೆಪಿ ಪಕ್ಷದ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ತಂಡ ಕಾಮಗಾರಿ ನಡೆಯುತ್ತಿರುವ ಗುಬ್ಬಿಯ ಸುಂಕಾಪುರಕ್ಕೆ ಭೇಟಿ ನೀಡಿದ್ರು.

ಹೌದು, ಮೇ.31 ರಂದು ತುಮಕೂರಿನಲ್ಲಿ ಕೆನಾಲ್‌ ಯೋಜನೆ ನಿಲ್ಲಿಸುವಂತೆ ದೊಡ್ಡ ಪ್ರತಿಭಟನೆಯೇ ನಡೆದಿತ್ತು. ನಿಷೇಧಾಜ್ಞೆಯ ನಡುವೆಯು ಕಾಮಗಾರಿ ಸ್ಥಳಕ್ಕೆ ತೆರಳಿದ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ರು. ಇದರ ಬೆನ್ನಲ್ಲೆ ಎಫ್‌ಐಅರ್‌ ದಾಖಲಾಗಿತ್ತು.ಆಕಾರಣಕ್ಕೆಇಂದುಬಿ.ವೈ.ವಿಜಯೇಂದ್ರ, ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ ಗುಬ್ಬಿಗೆ ಭೇಟಿ ನೀಡಿದ್ರು. ಈ ವೇಳೆ ಗ್ರಾಮಾಂತರ ಶಾಸಕಸುರೇಶಗೌಡ, ಮೈತ್ರಿಮುಖಂಡರು, ನೂರಾರುಕಾರ್ಯಕರ್ತರುಹಾಜರಿದ್ರು.

ಇದೇ ವೇಳೆ ಬಿ.ವೈ.ವಿಜಯೇಂದ್ರಮಾತನಾಡಿ, ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡ್ತಿದೆ. ಮಾನ್ಯಗೃಹಸಚಿವರು ಕಾಮಗಾರಿ ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದಾರೆ. ನಿಮ್ಮ ಹೊಣ ಪ್ರತಿಷ್ಠೆಯನ್ನು ಬಿಟ್ಟು ರೈತರು ಮತ್ತು ಮುಖಂಡರ ಜೊತೆ ಕೂತು ಸಭೆ ನಡೆಸಿ. ಆನಂತರ ನಿಮ್ಮ ಕಾಮಗಾರಿ ವಿಚಾರವನ್ನ ಹೇಳಿ. ಒಂದು ವೇಳೆ ನೀವು ಕಾಮಗಾರಿಗೆ ಮುಂದಾದ್ರೆ ಉಗ್ರಹೋರಾಟವನ್ನು ಎದುರಿಸಬೇಕೆಂದು ಎಚ್ಚರಿಕೆ ನೀಡಿದ್ರು.

ಛಲವಾದಿ ನಾರಾಯಣ ಸ್ವಾಮಿಮಾತನಾಡಿ, ರೈತರಿಗೆ ಬೇಡವಾದಯೋಜನೆ ನಿಮಗೆ ಯಾಕೆ ಎಂದು ಸರ್ಕಾರಕ್ಕೆ ಪ್ರಶ್ನೆಮಾಡಿದ್ರು. ನಾವು ಹೇಳಿದ್ದು ನಡೆಯಬೇಕೆಂಬ ಹಿಟ್ಲರ್‌ ಧೋರಣೆಯನ್ನುಮೊದಲುಕೈಬಿಡಿ. ಈಚಾನೆಲ್‌ ನೋಡಿದ್ರೆಗೊತ್ತಾಗುತ್ತೆ ಇದು ಅವೈಜ್ಞಾನಿಕವಾಗಿದೆ ಅಂತ. ಇಂತಹ ಅವೈಜ್ಞಾನಿಕ ಕಾಮಗಾರಿಯ ಮೂಲಕ ನೀರು ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದು ಕಿಡಿಕಾರಿದ್ರು.

ಎಂಎಲ್‌ಸಿಸಿ.ಟಿ.ರವಿಮಾತನಾಡಿ, ಗೃಹಸಚಿವರೇ ನೀರು ಹಿರಿಯರಿದ್ದೀರಿ. ಯಾರಿಗೂ ಹೆದರಿಕೊಳ್ಳಬೇಡಿ. ಕಾಮಗಾರಿಯನ್ನು ನೀವು ವಿರೋಧಿಸಿ ರೈತರಪರವಾಗಿನಿಲ್ಲಿ . ನೀರಿಗಾಗಿ ಹೋರಾಟ ಮಾಡಿದ ಜನಪ್ರತಿನಿಧಿ, ಸ್ವಾಮೀಜಿ, ಮುಖಂಡರ ಮೇಲೆ ಕೇಸ್ ಹಾಕಿರೋದು ಸರಿಯಿಲ್ಲ ಎಂದರು.

ಈ ಸಂದರ್ಭದ್ಲಲಿ ಶಾಸಕ ಸುರೇಶ್ ಗೌಡ, ಜ್ಯೋತಿ ಗಣೇಶ್ಹಾಗೂಬಿಜೆಪಿಜಿಲ್ಲಾಧ್ಯಕ್ಷ ರವಿಹೆಬ್ಬಾಕ, ಬಿಜೆಪಿ ಮುಖಂಡರು, ನೂರಾರು ಕಾರ್ಯಕರ್ತರು ಹಾಜರಿದ್ರು.

 

Author:

...
Keerthana J

Copy Editor

prajashakthi tv

share
No Reviews