ತಿಪಟೂರು :
ತಿಪಟೂರಿನಲ್ಲಿ ತಾಲೂಕು ಘಟಕ ವತಿಯಿಂದ ಮಕ್ಕಳ ಪ್ರತಿಭಾ ಕಲರವ ಕಾರ್ಯಕ್ರವನ್ನು ಕೇಂದ್ರ ಸಾಹಿತ್ಯ ಕನ್ನಡ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕರಾದ ಕೊಟ್ರೇಶ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಡಾ. ಹಸೀನಾ ಎಚ್. ಕೆ. ಪ್ರವಚನಕಾರಾರು, ಗಿರಿಜಾ ನಿರ್ವಾಣಿ, ಯೋಗ ಶಿಕ್ಷಕಿ, ಡಾ! ಭಾಸ್ಕಚಾರ್ ಪತ್ರಕರ್ತರು, ಶುಭ ವಿಶ್ವಕರ್ಮ, ಮಂಜುನಾಥ್ ಡಿ ಪತ್ರಕರ್ತ ಸೇರಿದಂತೆ ಸಾಹಿತಿಗಳು, ಗಣ್ಯರು ಹಾಜರಿದ್ದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕರಾದ ಕೊಟ್ರೇಶ್ ಮಾತನಾಡಿ ಇಂದು ಯಾವ ಮಕ್ಕಳನ್ನು ಕೇಳಿದರೂ ನಾನೊಬ್ಬ ವೈದ್ಯನಾಗಬೇಕು ಎಂಜಿನಿಯರ್ ಆಗಬೇಕು ಅಂತಾರೆ. ಆದರೆ ನಾನೊಬ್ಬ ಕವಿಯೋ ಸಾಹಿತಿಯೋ ಆಗಬೇಕು ಎನ್ನುವ ಮಾತು ಎಲ್ಲೂ ಕೇಳಿ ಬರುತ್ತಿಲ್ಲ. ನಮ್ಮ ನಾಡು, ನುಡಿ ಭಾಷೆ ಸಂಸ್ಕೃತಿಯನ್ನು ಲೋಕಕ್ಕೆ ಪರಿಚಯಿಸುವುದೇ ಪುಸ್ತಕಗಳು, ಅಲ್ದೇ ಸಾಹಿತ್ಯ ಲೋಕದಲ್ಲಿ ಹೊಸ ಆಯಾಮ ಬರಹಗಾರರು ಮುನ್ನೆಲೆಗೆ ಬರಬೇಕು ಇದನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸುವುದು ನಮ್ಮ ಕರ್ತವ್ಯ ಎಂದರು.
ಇನ್ನು ಪ್ರತಿಮಾ ಕಲರವ ಎಂಬ ಹೆಸರಿನಲ್ಲಿ ಸುಮಾರು 17 ವಿಷಯಗಳಿಗೆ ಸಂಬಂಧಪಟ್ಟ ಕೌಶಲ್ಯಗಳಲ್ಲಿ ಮಕ್ಕಳಿಗೆ ಯೋಗ ಧ್ಯಾನ, ಚಿತ್ರಕಲೆ, ಕಥೆ, ವಿವಿಧ ರೀತಿ ಜೀವನ ಕೌಶಲ್ಯಗಳು, ಸಾಮಾಜಿಕ ಕೌಶಲ್ಯಗಳು, ಸಂಸ್ಕೃತ ಕೌಶಲ್ಯಗಳನ್ನು ಮಕ್ಕಳಿಗೆ ಬೆಳೆಸುವ ನಿಟ್ಟಿನಲ್ಲಿ ಎರಡು ದಿನ ಕಾಲ ಈ ಕ್ಯಾಂಪ್ ಮಾಡಿದ್ದು ಬಹಳ ಯಶಸ್ವಿಯಾಗಿದೆ ಎಂದರು.
ಈ ವೇಳೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ ರಂಗೋಲಿ ಕವನ ಬರೆದಂತ ಮಕ್ಕಳಿಗೆ ಸರ್ಟಿಫಿಕೆಟ್ ನೀಡಲಾಯಿತು. ಇನ್ನು ಲತಾ ಮಣಿ ಎಂಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಈ ವೇಳೆ ಸನ್ಮಾನಿಸಲಾಯಿತು.