Davanagere : ವೃದ್ಧ ದಂಪತಿಯನ್ನು ಕೊಲೆ ಮಾಡಿದ ಮೂವರಿಗೆ ಜೀವಾವಧಿ ಶಿಕ್ಷೆ  

DAVANAGERE : ಸಾಲ ತೀರಿಸಲು ಸಾಧ್ಯವಾಗದೇ, ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 01ನೇ ಹೆಚ್ಚುವರಿ ನ್ಯಾಯಮೂರ್ತಿ ಅವರು ತೀರ್ಪು ಪ್ರಕಟಿಸಿದ್ದು, ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹35,000 ದಂಡ ವಿಧಿಸಿದ್ದಾರೆ.

2025ರ ಜನವರಿ 25ರಂದು ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ವೃದ್ಧ ದಂಪತಿ ಗುರುಸಿದ್ದಯ್ಯ ಮಠದ ಮತ್ತು ಸರೋಜಮ್ಮ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ದಂಪತಿಯ ಪುತ್ರಿ ಜ್ಯೋತಿ ಎಂ.ಜಿ. ಅವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಕುಮಾರ (38), ಪರಶುರಾಮ (33) ಮತ್ತು ಮರಿಸ್ವಾಮಿ (30) ಎಂಬುವವರು ಈ ಭೀಕರ ಅಪರಾಧಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದರು. ವಿಚಾರಣೆ ನಂತರ ಇದೀಗ ನ್ಯಾಯಾಲಯ ಈ ಮೂವರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ ₹35,000 ದಂಡ ವಿಧಿಸುವ ತೀರ್ಪು ಪ್ರಕಟಿಸಿದೆ. 

Author:

...
Sushmitha N

Copy Editor

prajashakthi tv

share
No Reviews