BANGALORE : ದರ್ಪ ಮೆರೆದ ಹೊರ ರಾಜ್ಯದ ಯುವತಿ | ಕೊನೆಗೂ ಕ್ಷಮೆಯಾಚನೆ

BANGALORE NEWS : ಬೆಂಗಳೂರಿನ ಬೆಳ್ಳಂದೂರು ವೃತ್ತದಲ್ಲಿ [Bellandur Circle] ನಡೆದ ಓರ್ವ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿರುವ ಹೊರ ರಾಜ್ಯದ ಮಹಿಳೆ ಮತ್ತು ಆಕೆಯ ಗಂಡ ಇದೀಗ  ಕ್ಷಮೆ ಕೇಳಿದ್ದಾರೆ. ಅಲ್ಲದೇ, ಚಾಲಕ ಹಾಗೂ ಆತನ ಪತ್ನಿಯ ಕಾಲು ಮುಟ್ಟಿ ಕ್ಷಮೆಯಾಚಿಸಿದ್ದಾರೆ. ಇದೀಗ ಕ್ಷಮೆ ಕೇಳಿರುವ ಪೋಟೊಗಳು SOCIAL MEDIA ದಲ್ಲಿ ವೈರಲ್ ಆಗಿವೆ.

28 ವರ್ಷದ ಪನ್ಪೂರಿ ಮಿಶ್ರಾ, ತಮ್ಮ ತಪ್ಪಿಗೆ ನಿಜವಾದ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. "ನಮಗೆ ಕನ್ನಡ, ಕರ್ನಾಟಕ ಮತ್ತು ಇಲ್ಲಿನ ಜನರ ಬಗ್ಗೆ ಗೌರವವಿದೆ. ಎಲ್ಲ ಕನ್ನಡಿಗರು ಮತ್ತು ಆಟೋ ಡ್ರೈವರ್‌ಗಳು ನನ್ನನ್ನು ಕ್ಷಮಿಸಬೇಕು. ಮತ್ತೊಮ್ಮೆ ಈ ರೀತಿ ನಡೆಯದು. ಐ ಲವ್ ಬೆಂಗಳೂರು. ಜೈ ಕರ್ನಾಟಕ!" ಎಂದು ಮಿಶ್ರಾ ಹೇಳಿದ್ದಾರೆ.

ಘಟನೆ ಕುರಿತು ಮಾತನಾಡಿದ ಮಿಶ್ರಾ "ನಾನು ಗರ್ಭಿಣಿ. ಬೈಕ್‌ನಲ್ಲಿ ಹೋಗುತ್ತಿದ್ದಾಗ ಆಚಾನಕ್ ಆಟೋ ಸಿಕ್ಕಿದ ತಕ್ಷಣ ನನಗೆ ಭಯವಾಯ್ತು. ಗಾಬರಿಯಲ್ಲಿ ಆಲೋಚನೆ ಮಾಡದೇ ಆ ಚಾಲಕನಿಗೆ ಚಪ್ಪಲಿ ಹೊಡೆದಿಟ್ಟೆ. ಈಗ ನನಗೆ ತನ್ನ ತಪ್ಪು ಅರ್ಥವಾಗಿದೆ," ಎಂದಿದ್ದಾರೆ.

ಇನ್ನು ಈ ಕುರಿತು ಬೆಳ್ಳಂದೂರು ಠಾಣೆ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ಮಹಿಳೆಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆದುಕೊಂಡು ಬಂದು, ವಿಚಾರಣೆ ನಡೆಸಿದ್ದರು.  ಆಬಳಿಕ, ಚಾಲಕ ಹಾಗೂ ಪತ್ನಿಯ ಕಾಲು ಮುಟ್ಟಿ ದಂಪತಿಗಳು ಕ್ಷಮೆ ಕೇಳಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews