ತುಮಕೂರು : ಹೇಮಾವತಿ ಲಿಂಗ್ ಕೆನಾಲ್ ಯೋಜನೆಯನ್ನು ಸ್ಥಗಿತಗೊಳಿಸದ ಸರ್ಕಾರ ಮೊಂಡುತನಕ್ಕೆ ಉತ್ತರ ನೀಡಲು ಹೋರಾಟ ಸಮಿತಿಯು ಸಜ್ಜಾಗಿದೆ. ಈ ಕಾರಣಕ್ಕೆ ಇಂದು ತುಮಕೂರಿನಲ್ಲಿ ಬಿಜೆಪಿ-ಜೆಡಿಎಸ್ ಮತ್ತು ವಿವಿಧ ಮಠದ ಸ್ವಾಮೀಜಿಗಳು, ಮುಖಂಡರು ಜಯದೇವ ಮುರುಗರಾಜೇಂದ್ರ ಸಭಾಭವನದಲ್ಲಿ ಸಭೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ರು.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕಿಂಗ್ ಕೆನಾಲ್ ಯೋಜನೆ ವಿರುದ್ಧ ಹೋರಾಟದ ಕಿಚ್ಚು ಹೆಚ್ಚಾಗುತ್ತಿದೆ. ಲಿಂಕ್ ಕೆನಾಲ್ ಯೋಜನೆಯಿಂದಾಗಿ ಜಿಲ್ಲೆಯ ಜನರಿಗೆ ತೊಂದರೆಯಾಗುತ್ತದೆ ಅಂತ ಸತತ ಒಂದು ವರ್ಷದಿಂದ ಹೋರಾಟ ನಡೆಸಲಾಗುತ್ತಿಎ. ಆದ್ರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಸರ್ಕಾರ ಹೇಳದೆ ಕೇಳದೆ ಗುಬ್ಬಿಯ ಸಂಕಾಪುರದ ಬಳಿ ಮಾಗಡಿಗೆ ನೀರು ಹಾಯಿಸುವ ಪೈಪ್ ಲೈನ್ ಕಾಮಗಾರಿಗೆ ಮುಂದಾಗಿತ್ತು. ಇದನ್ನು ಖಂಡಿಸಿ ರೈತ ಸಂಘ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಮುಖಂಡರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಕಿಡಿಕಾರಿದ್ರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ರು. ಇದರ ಭಾಗವಾಗಿ ಇಂದು ಮೈತ್ರಿ ನಾಯಕರು ಮತ್ತು ಮಠಾಧೀಶರುಗಳು ಸೇರಿ ಮಹತ್ವದ ಸಭೆ ನಡೆಸಿದ್ರು.
ಇಂದು ನಡೆದ ಸಭೆಯಲ್ಲಿ ಹೇಮಾವತಿ ಕೆನಾಲ್ ಲಿಂಕ್ ಯೋಜನೆಯ ವಿರುದ್ಧ ರೂಪು ರೇಷೆಗಳನ್ನು ಸಿದ್ದಪಡಿಸುವ ಕುರಿತು ತೀರ್ಮಾನಿಸಲಾಯಿತು. ಈ ವೇಳೆ ಗೊಲ್ಲರಹಳ್ಳಿ ಮಠದ ವಿದ್ಯಾಶಂಕರ್ ಸ್ವಾಮೀಜಿ ಮಾತನಾಡಿ, ಕೆನಾಲ್ ಯೋಜನೆಯ ವಿರುದ್ಧ ನಾವು ಹೋರಾಟ ಮಾಡುತಿದ್ದೇವೆ. ಆದ್ರೂ ಸರ್ಕಾರ ಯೋಜನೆಯನ್ನು ಕೈಬಿಡುತ್ತಿಲ್ಲ. ಆದ ಕಾರಣ ನಾವುಗಳು ಮುಂದಿನ ದಿನಗಳಲ್ಲಿ ಕಾನೂನಿ ಹೋರಾಟ ಮಾಡಬೇಕಾಗಿದೆ ಎಂದರು.
ಇದೇ ವೇಳೆ ಬಿಂದು ಶೇಖರ್ ಸ್ವಾಮೀಜಿ ಮತ್ತು ನಗರ ಶಾಸಕ ಜ್ಯೋತಿಗಣೇಶ್ ಕೂಡ ವಿದ್ಯಾಶಂಕರ್ ಸ್ವಾಮೀಜಿಯವರ ಮಾತಿಗೆ ಸಮ್ಮತಿ ಸೂಚಿಸಿದ್ರು.
ಈ ಸಂದರ್ಭದಲ್ಲಿ ಜಿಲ್ಲೆಯ ಒಳಿತಿಗಾಗಿ ಮಾಡುತ್ತಿರುವ ಈ ಹೋರಾಟಕ್ಕೆ ಸಾರ್ವಜನಿಕರು ಹಾಗೂ ಪಕ್ಷಬೇಧ ಮರೆತು ಎಲ್ಲಾ ನಾಯಕರು, ಮುಖಂಡರು ಒಗ್ಗೂಡಬೇಕು ಎಂದು ಕರೆ ನೀಡಿದರು. ಇದೇ ವೇಳೆ ಬಿಜೆಪಿ ಶಾಸಕ ಜ್ಯೋತಿ ಗಣೇಶ್, ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ , ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಮುಖಂಡ ದಿಲೀಪ್ ಕುಮಾರ್ ಹಾಜರಿದ್ರು.