Sira : ಮನೆಗಳಿಗೆ ನುಗ್ಗುತ್ತಿದೆ ಚರಂಡಿ ನೀರು | ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

SIRA : ಶಿರಾ ನಗರದ ಶಾಸಕರೇ, ಅಧಿಕಾರಿಗಳೇ ಎಲ್ಲಿದ್ದೀರಿ..? ಇಲ್ಲಿನ ಜನರ ಸ್ಥಿತಿಯನ್ನು ಒಮ್ಮೆ ನೋಡಿ, ಮಳೆ ಇಲ್ಲ ಅಂದರೆ ಒಂಥರಾ ಸಮಸ್ಯೆ ಆದರೆ, ಮಳೆ ಬಂದರೆ ಇನ್ನೊಂದು ಥರಾ ಸಮಸ್ಯೆಯಾಗಿದೆ. ಮಳೆ ಬರಲಿ ಅಂತಾ ದೇವರ ಮೊರೆ ಹೋದರೆ, ಇತ್ತ ಈ ಜನರು ಯಾಕಪ್ಪ ಮಳೆ ಬಂತೂ ಅಂತಾ ಶಪಿಸುವಂತಹ ಕಾಲ ಬಂದಿದೆ. ಮಳೆ ಬಂದರೆ ಸಾಕು ಇವರು ರಾತ್ರಿ ಎಲ್ಲಾ ಜಾಗರಣೆ ಇರಬೇಕಿದೆ.

ಶಿರಾ ನಗರ ಸೇರಿದಂತೆ ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಲಾಗಿದ್ದು, ಇದರಿಂದ ಮಳೆ ಬಂದರೆ ಸಾಕು ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಹೈರಾಣಾಗಿದ್ದಾರೆ. ಶಿರಾ ತಾಲ್ಲೂಕಿನ ಕೊಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕನ ಕೋಟೆ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಲಾಗಿದ್ದು, ಮೊನ್ನೆ ಸುರಿದ ಭಾರೀ ಮಳೆಗೆ ಚಿಕ್ಕನಕೋಟೆ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಿಂದ ನೀರು ಹೊರ ಹಾಕಲು ನಿವಾಸಿಗಳು ಹೈರಾಣಾದರು. ಅಲ್ಲದೇ ಚರಂಡಿ ನೀರು ಮನೆ ಸೇರೋದರಿಂದ ನಿವಾಸಿಗಳು ರೋಗಕ್ಕೆ ತುತ್ತಾಗುವ ಭೀತಿಗೆ ಸಿಲುಕಿದ್ದಾರೆ,  ಒಂದ್ಕಡೆ ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಾಣ ಮಾಡಿದರೆ, ಇನ್ನೊಂದ್ಕಡೆ ಚರಂಡಿಗಳಲ್ಲಿ ಕಸ ತುಂಬಿಕೊಂಡಿದ್ರು ಕ್ಲೀನ್‌ ಮಾಡಿಸುವ ಕೆಲಸ ಮಾಡ್ತಾ ಇಲ್ಲ ಇದರಿಂದ ಚರಂಡಿ ನೀರು ಮನೆಗೆ ಬರ್ತಾ ಇದ್ದು ಗ್ರಾಮಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ.

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಗ್ರಾಮದಲ್ಲಿ ನಿರ್ಮಾಣ ಆಗಿರೋ ಅವೈಜ್ಞಾನಿಕ ಚರಂಡಿಗಳನ್ನು ಸರಿಪಡಿಸಿ ನಿವಾಸಿಗಳನ್ನು ಸಂಕಷ್ಟದಿಂದ ದೂರ ಮಾಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews