BANGALORE NEWS : ನಿನ್ನೆ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ RCB ಜಯೋತ್ಸವ ಸಂಭ್ರಮವನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಈ ಸಂಭ್ರಮ ದುರಂತದಲ್ಲಿ ಪರಿವರ್ತನವಾಗಿ, ನೂಕು ನುಗ್ಗಲಿನಲ್ಲಿ 11 ಮಂದಿ ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ.
ಈ ದುರಂತದ ಬಳಿಕ, RCB ಫ್ರಾಂಚೈಸಿ ತಕ್ಷಣವೇ ಪ್ರತಿಕ್ರಿಯಿಸಿ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಅಲ್ಲದೆ ಗಾಯಗೊಂಡ ಅಭಿಮಾನಿಗಳಿಗೆ ಸಹಾಯ ಮಾಡಲು ‘RCB Cares’ ಹೆಸರಿನ ವಿಶೇಷ ನಿಧಿಯನ್ನು ಸ್ಥಾಪಿಸುವುದಾಗಿ ಹೇಳಿದೆ.
'ನಿನ್ನೆ ಬೆಂಗಳೂರಿನಲ್ಲಿ ನಡೆದ ಈ ದುರ್ಘಟನೆ ನಮ್ಮ ಹೃದಯವನ್ನು ಮುರಿದಿದೆ. ನಾವು ಈ ದುಃಖದ ಕ್ಷಣದಲ್ಲಿ ಮೃತರ ಕುಟುಂಬಗಳೊಂದಿಗೆ ಇರುತ್ತೇವೆ. ಅವರು ನಮ್ಮ ಪರಿವಾರದ ಭಾಗ’ ಎಂದು TWEETER ನಲ್ಲಿ RCB ಸಂತಾಪ ವ್ಯಕ್ತಪಡಿಸಿದೆ.