ಬೆಂಗಳೂರು : ಕಮಲ್ ಹಾಸನ್ ಹೇಳಿಕೆಯ ಹಿನ್ನಲೆಯಲ್ಲಿ ರಮ್ಯಾ ಪ್ರತಿಕ್ರಿಯೆ

ಬೆಂಗಳೂರು : ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂಬ ಕಮಲ್ ಹಾಸನ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಿನಲ್ಲಿಯೇ ಹಿರಿಯ ನಟಿಯರು  ಈ ಒಂದು ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ.

ಇದೀಗ ನಟಿ ರಮ್ಯಾ ಕಮಲ್‌ ಪರ ಬ್ಯಾಟ್‌ ಬೀಸಿದ್ದಾರೆ.  ಈ ಬಗ್ಗೆ ಟ್ವೀಟ್‌ ಮಾಡಿಕೊಂಡಿದ್ದಾರೆ. ರಮ್ಯಾ ಪೋಸ್ಟ್‌ನಲ್ಲಿ, ಕಮಲ್ ಬಹಿಷ್ಕಾರ ಸ್ವಲ್ಪ ಅತಿಯಾಯಿತಲ್ಲವೇ? ತಪ್ಪು ಕ್ಷಮಿಸಬಹುದಾದದ್ದು..! ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಎಲ್ಲವೂ ದ್ರಾವಿಡ ಭಾಷೆಗಳು. ನಾವು ಭಾಷೆಯಲ್ಲಿ ಪೂರ್ವಜ ಸಂಬಂಧಗಳನ್ನು ಹಾಗೂ ಹೋಲಿಕೆಯನ್ನು ಹೊಂದಿದ್ದೇವೆ. ಆದರೆ ಬಹಿಷ್ಕಾರ ಮಾಡುವುದು ಸ್ವಲ್ಪ ಅತಿಯಾಯಿತು ಅಲ್ಲವೇ? ಎಂದು ಎಕ್ಸ್ ನಲ್ಲಿ ರಮ್ಯಾ ಪೋಸ್ಟ್ ಮಾಡಿದ್ದಾರೆ.

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಎಲ್ಲವೂ ದ್ರಾವಿಡ ಭಾಷೆಗಳು. ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿ ಎಂದು ಭಾವಿಸುವ ಇತರರಿಗೆ - ನೀವು ಕೂಡ ತಪ್ಪಾಗಿ ಭಾವಿಸಿದ್ದೀರಿ. ಸಂಸ್ಕೃತ ಇಂಡೋ-ಆರ್ಯನ್ ಮತ್ತು ನಾವು ದ್ರಾವಿಡರು. ಪರಸ್ಪರ ಭಿನ್ನವಾಗಿದೆ. ಕಮಲ್ ಹಾಸನ್ ಚಿತ್ರವನ್ನು ಬಹಿಷ್ಕರಿಸುವುದು ಅತಿ ಆಯ್ತು ಅಲ್ಲವೇ? ಹಿಂದಿ ಹೇರಿಕೆಯ ವಿರುದ್ಧ ನಾವು ಒಂದಾಗಬೇಕು ಆದರೆ ಅದಕ್ಕಾಗಿ ಮೊದಲು ನಾವು ಪರಸ್ಪರ ಗೌರವವನ್ನು ಹೊಂದಿರಬೇಕು ಎಂದು ಬರೆದುಕೊಂಡಿದ್ದಾರೆ.  

 

Author:

...
Keerthana J

Copy Editor

prajashakthi tv

share
No Reviews