BELAGAVI : ಕಾಲ್ತುಳಿತ ಪ್ರಕರಣದಲ್ಲಿ ಸಾವಿಗೀಡಾದ ಕುಟುಂಬಗಳಿಗೆ ಒಂದೊಂದು ಕೋಟಿ ಪರಿಹಾರ ನೀಡಬೇಕು | ಲಕ್ಷ್ಮಿ ಹೆಬ್ಬಾಳ್ಕರ್

BELAGAVI NEWS : ಬೆಂಗಳೂರು ಕಾಲ್ತುಳಿತದಲ್ಲಿ [Stampede] ದುರ್ಮರಣಕ್ಕೀಡಾದವರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ರಾಜ್ಯದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ [Lakshmi hebalkar] ತೀವ್ರವಾಗಿ ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ [Belagavi] ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ನೀಡಿರುವ ಪರಿಹಾರ ಮಾತ್ರವಲ್ಲ, ಇನ್ನೂ ಹೆಚ್ಚಿನ ಪರಿಹಾರ ಬೇಕು ಎಂಬ ಬೇಡಿಕೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದರು.

“ಸರ್ಕಾರದ ಜೊತೆಗೆ RCB ಫ್ರಾಂಚೈಸಿ ಹಾಗೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (KSCA) ಕೂಡ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಬರೀ ಹತ್ತು ಲಕ್ಷ ಅಲ್ಲ, ತಲಾ ಒಂದು ಕೋಟಿ ಪರಿಹಾರ ಕೊಡಬೇಕು ಅಂತ ನಾನು ಒತ್ತಾಯಿಸುತ್ತೇನೆ,” ಎಂದು ಅವರು ಹೇಳಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಘಟನೆಯ ಕುರಿತು ಭಾವನಾತ್ಮಕವಾಗಿ ಮಾತನಾಡುತ್ತಾ, “ಎಷ್ಟೇ ಪರಿಹಾರ ಕೊಟ್ಟರೂ ಸತ್ತ ಜೀವ ವಾಪಸ್ ಬರೋದಿಲ್ಲ. ಆದರೆ ಕುಟುಂಬಗಳಿಗೆ ಭರವಸೆ, ಆತ್ಮಸ್ಥೈರ್ಯ ನೀಡುವುದು ನಮ್ಮ ಹೊಣೆಗಾರಿಕೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರು ವಿಪಕ್ಷಗಳ ವಿರುದ್ಧವೂ ವ್ಯಂಗ್ಯವಾಡಿ ಮಾತನಾಡುತ್ತಾ, “ವಿಪಕ್ಷದವರು ಈ ರೀತಿಯ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಾರೆ. ಆದರೆ ನಮ್ಮ ನಾಯಕರು, ಹಿರಿಯರು ಅಗತ್ಯವಾದ ಉತ್ತರಗಳನ್ನು ನೀಡುತ್ತಾರೆ,” ಎಂದು ಹೇಳಿದರು.ಇನ್ನು ಘಟನೆಯಲ್ಲಿ ಬುದ್ಧಿವಂತಿಕೆ ವಿಭಾಗ (ಇಂಟಲಿಜೆನ್ಸ್) ಯಿಂದ ತಪ್ಪು ನಡೆದಿದೆ ಎಂಬ ಶಂಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಈ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲಿ ತಪ್ಪಾಗಿದೆ, ಏನು ನಡೆದಿದೆಯೋ ಅದು ತನಿಖೆಯಿಂದ ಬಹಿರಂಗವಾಗಲಿದೆ,” ಎಂದು ಹೇಳಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews