CHIKKANAYAKANAHALLI : ಚಿಕ್ಕನಾಯಕನಹಳ್ಳಿಯಲ್ಲಿ ನಿಖಿಲ್‌ಗೆ ಭರ್ಜರಿ ಸ್ವಾಗತ

CHIKKANAYAKANAHALLI NEWS : ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ [NIKHIL KUMARA SWAMY] ಇಂದು ತುಮಕೂರಿನ ಚಿಕ್ಕನಾಯಕನಹಳ್ಳಿಗೆ [CHIKKANAYAKANAHALLI] ಭೇಟಿ ನೀಡಿ ಪಕ್ಷದ ಸಂಘಟನಾ ಕಾರ್ಯಗಳಿಗೆ ಹೊಸ ಚೈತನ್ಯ ತುಂಬಿದ್ದಾರೆ. ಶಾಸಕ ಸುರೇಶ್ ಬಾಬು [SURESH BABU] ಅವರ ನೇತೃತ್ವದಲ್ಲಿ ನಿಖಿಲ್‌ಗೆ ಭವ್ಯ ಸ್ವಾಗತ ನೀಡಲಾಯಿತು.

ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ನಿಖಿಲ್ ಪಾಲ್ಗೊಂಡು, ಪಕ್ಷದ ಬಲವರ್ಧನೆಗೆ ಸುದೀರ್ಘ ಭಾಷಣವನ್ನೂ ನೀಡಿದರು. ಈ ಕಾರ್ಯಕ್ರಮದ ನಂತರ ನಡೆದ ರೋಡ್ ಶೋ ಪ್ರಭಾವಶಾಲಿಯಾಗಿ ಮುಂದುವರೆದಿದ್ದು, ಸಾವಿರಾರು ಕಾರ್ಯಕರ್ತರು ಭಾಗಿಯಾಗಿ ಭಾರೀ ಉತ್ಸಾಹ ಪ್ರದರ್ಶಿಸಿದರು.

ಜೆಡಿಎಸ್ ರಾಜ್ಯ ಸಂಘಟನೆಗೆ ಬಲ ತುಂಬುವ ಉದ್ದೇಶದೊಂದಿಗೆ ನಿಖಿಲ್ ಕುಮಾರಸ್ವಾಮಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದು, ಈ ಬಾರಿ ತುಮಕೂರಿನಲ್ಲಿ ಕಂಡ ಸಜೀವ ಪಕ್ಷ ಚಟುವಟಿಕೆ, ಸಂಘಟನಾ ಶಕ್ತಿ ಮತ್ತು ನಾಯಕತ್ವ ಮಿಂಚು ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

 

Author:

...
Keerthana J

Copy Editor

prajashakthi tv

share
No Reviews