ಮಂಡ್ಯ : ಮೂರು ದಿನದ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ ಹೃದಯಾಘಾತಕ್ಕೇ ಬಲಿ..!

ಮೃತ ಯುವಕ ಶಶಾಂಕ್‌ (28)
ಮೃತ ಯುವಕ ಶಶಾಂಕ್‌ (28)
ಮಂಡ್ಯ

ಮಂಡ್ಯ:

ಸಾವು ಯಾವಾಗ ಹೇಗೆ ಬರುತ್ತೇ ಅಂತ ಯಾರಿಗೂ ತಿಳಿದಿಲ್ಲ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವುಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇದೀಗ ಮೂರು ದಿನದ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಹೃದಯಾ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ಪಟ್ಟಣದಲ್ಲಿ ನಡೆದಿದೆ.

ಕೆ. ಆರ್‌ ಪೇಟೆ ಪುರಸಭೆ ಸದಸ್ಯ ಮಂಜುನಾಥ್‌ ಅವರ ಪುತ್ರ 28 ವರ್ಷದ ಶಶಾಂಕ್‌ ಮೃತ ದುರ್ದೈವಿಯಾಗಿದ್ದಾನೆ. ಬೆಂಗಳೂರಿನಲ್ಲಿ ಖಾಸಗೀ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿದ್ದ ಈತ ಕಳೆದ ಭಾನುವಾರವಷ್ಟೇ ಅದ್ದೂರಿಯಾಗಿ ಮದುವೆಯಾಗಿದ್ದ, ಜಾರ್ಖಾಂಡ್‌ ಮೂಲದ ಯುವತಿಯನ್ನು ಪ್ರೀತಿಸಿ ಮನೆಯವರನ್ನೆಲ್ಲ ಒಪ್ಪಿಸಿ ಮೈಸೂರಿನ ರೆಸಾರ್ಟ್‌ ನಲ್ಲಿ ಅದ್ದೂರಿಯಾಗಿ ಆಪ್ತರ ಸಮ್ಮುಖದಲ್ಲಿ ಶಶಾಂಕ್ ಮದುವೆಯಾಗಿದ್ದರು.

ಆದರೆ ಮಂಗಳವಾರ ಶಶಾಂಕ್‌ ಗೆ ಬೆಂಗಳೂರಿನ ನಿವಾಸದಲ್ಲಿ ಎದೆನೋವು ಕಾಣಿಸಿಕೊಂಡು, ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆದಲ್ಲೇ ಸಾವಿಗೀಡಾಗಿದ್ದಾರೆ. ಶಶಾಂಕ್‌ ಸಾವಿನಿಂದ ಆತನ ತಂದೆ ತಾಯಿ, ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Author:

share
No Reviews