KORATAGERE : ಪರಂ ಕ್ಷೇತ್ರದಲ್ಲೇ ಕೆಎಸ್ ಆರ್ ಟಿಸಿ ಶಾಕ್ | ಬಸ್ ಗಳಿಲ್ಲದೇ ಪ್ರಯಾಣಿಕರ ಪರದಾಟ

KORATAGERE NEWS : ಶನಿವಾರ, ಭಾನುವಾರ ಬಂತೆಂದ್ರೆ ಬೆಂಗಳೂರಿನಲ್ಲಿರೋ ತುಮಕೂರು ಭಾಗದ ಜನರ ತಮ್ಮ ಗ್ರಾಮದತ್ತ ಮುಖ ಮಾಡುವುದು ಕಾಮನ್‌. ಆದ್ರಂತೆ ವೀಕೆಂಡ್‌ ಹಿನ್ನಲೆ ಪಾವಗಡ, ಕೊರಟಗೆರೆಯ ಜನ ಬೆಂಗಳೂರಿನಿಂದ ಬಂದಿದ್ರು. ನಿನ್ನೆ ವೀಕೆಂಡ್‌ ಮುಗಿಯಿತು, ಇಂದು ಸೋಮವಾರ ಎಂದಿನಂತೆ ಕೆಲಸಕ್ಕೆ ತೆರಳಲು ಮುಂದಾದ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಶಾಕ್‌ ನೀಡಿದ್ದು, ಬಸ್‌ಗಳಿಲ್ಲದೇ ಪ್ರಯಾಣಿಕರು ಪರದಾಡುವಂತಾಯ್ತು. ಹೌದು ಕೊರಟಗೆರೆಯಿಂದ ಬೆಂಗಳೂರಿಗೆ ತೆರಳಲು ಬಸ್‌ಗಳು ಇಲ್ಲದೇ ಪ್ರಯಾಣಿಕರು ಪರದಾಡುವಂತಾಯ್ತು.

ಹೌದು, ಗೃಹ ಸಚಿವರ ಕ್ಷೇತ್ರವಾದ ಕೊರಟಗೆರೆಯಲ್ಲಿ ಬೆಂಗಳೂರು ಕಡೆ ತೆರಳಲು ಬಸ್‌ಗಳು ಇಲ್ಲದೇ ಪ್ರಯಾಣಿಕರು ಪರದಾಡುವಂತಾಯ್ತು, ಬೆಂಗಳೂರಿಗೆ ತೆರಳಲು ನೂರಾರು ಪ್ರಯಾಣಿಕರು ಮುಂಜಾನೆ 4 ಗಂಟೆಯಿಂದಲೂ ಬಸ್‌ ನಿಲ್ದಾಣದಲ್ಲಿ ಕಾಯ್ದು ಕಾಯ್ದು ಪ್ರಯಾಣಿಕರು ಹೈರಾಣಾದ್ರು. ಕೆಲ ಬಸ್‌ಗಳು ಕೊರಟಗೆರೆ ಪಟ್ಟಣಕ್ಕೆ ಬಾರದೇ ಬೈಪಾಸ್‌ ಮೂಲಕ ಹಾದು ಹೋಗ್ತಾ ಇದ್ದು, ಇನ್ನು ಕೆಲ ಬಸ್‌ಗಳು ಬಂದ್ರು ನಿಲ್ಲಿಸದೇ ಹೋಗ್ತಾ ಇರೋದ್ರಿಂದ ಪ್ರಯಾಣಿಕರು ಬಸ್‌ ತಡೆದು, ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು. ಪ್ರತಿಭಟನೆಯಿಂದ ಕೆಲ ಕಾಲ ಟ್ರಾಫಿಕ್‌ ಜಾಮ್‌ ಕೂಡ ಉಂಟಾಯ್ತು.

ಇನ್ನು ಸ್ಥಳಕ್ಕೆ ಬಂದ ಪೊಲೀಸರು ಪ್ರಯಾಣಿಕರ ಸಮಸ್ಯೆ ಆಲಿಸಿದ್ರು. ಕೂಡಲೇ ತುಮಕೂರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕರೆ ಮಾಡಿ ಪ್ರಯಾಣಿಕರ ಸಮಸ್ಯೆಯ ಬಗ್ಗೆ ತಿಳಿ ಹೇಳಿದ್ರು. ಪ್ರತಿಭಟನೆಯಿಂದ ಉಂಟಾಗಿದ್ದ ಟ್ರಾಫಿಕ್‌ ಜಾಮ್‌ನನ್ನು ಕ್ಲಿಯರ್‌ ಮಾಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇತ್ತ ಪಾವಗಡ ಮತ್ತು ಮಧುಗಿರಿ ಕಡೆಯಿಂದ ಬಂದಂತಹ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖೈ ಹೆಚ್ಚಳವಾಗಿದ್ದರಿಂದ ಸಮಯದ ಅಭಾವದಿಂದ ಕೆಲ ಪ್ರಯಾಣಿಕರು ಸರ್ಕಾರಿ ಬಸ್ ತೊರೆದು ಖಾಸಗಿ ಬಸ್ ಹಿಡಿದು ಪ್ರಯಾಣಿಸಿದ್ರು.

ಇನ್ನು ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿದ ನಗರ ಪೋಲಿಸ್ ಇಲಾಖೆ ಪಿಎಸ್‌ಐ ತೀರ್ಥೇಶ್ ತುಮಕೂರು ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಶೀಘ್ರವೇ ಬಸ್ ಬಿಡುವಂತೆ ಭರವಸೆ ನೀಡಿದ್ರು.

Author:

...
Keerthana J

Copy Editor

prajashakthi tv

share
No Reviews