KORATAGERE : ವಿಶ್ವದ 145 ದೇಶಗಳಲ್ಲಿ ಭಾರತ ದೇಶದ ಯೋಗವನ್ನು ಶಿಬಿರಗಳ ಮೂಲಕ ಆಯೋಜಿಸಿ ಪರಿಚಯ ಮಾಡಿಸಿರೋದು ನನಗೇ ಹಮ್ಮೆಯ ಸಂಗತಿ ಎಂದು ಅಂತರಾಷ್ಟ್ರೀಯ ಯೋಗಾಪಟು ಭಾಗೀರತಿ ಕನ್ನಡತಿ ಕೊರಟಗೆರೆಯಲ್ಲಿ ತಿಳಿಸಿದರು.
ಕೊರಟಗೆರೆ ಪಟ್ಟಣದ ಶ್ರೀರಾಘವೇಂದ್ರ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ಕೆಎಸ್ಆರ್ ಪಿ ಘಟಕ, ಪ್ರಿಯದರ್ಶಿನಿ ಪದವಿಪೂರ್ವ ಕಾಲೇಜು ಮತ್ತು ಶ್ರೀರಾಘವೇಂದ್ರ ಇಂಟರ್ ನ್ಯಾಷನಲ್ ಶಾಲೆಯಿಂದ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಜೂ.21ರಂದು ಯೋಗ ದಿನಾಚರಣೆ ನಡೆಯಲಿದೆ. ಅದಕ್ಕೆ ತಯಾರಿಯಾಗಿ ಇಂದು ರಾಘವೇಂದ್ರ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯೋಗ ಶಿಬಿರ ಆಯೋಜಿಸಿ, ಮಕ್ಕಳಿಗೆ ಯೋಗ ತರಬೇತಿ ನೀಡಲಾಯಿತು. ನಮ್ಮ ದೇಶದ ಸಂಸ್ಕೃತಿ ವಿಶ್ವಕ್ಕೆ ಪರಿಚಯಿಸುವುದು ನಮ್ಮ ಜವಾಬ್ದಾರಿ ಆಗಿದೆ ಎಂದು ಹೇಳಿದರು.
ಸಾರಂಗ ಅಕಾಡೆಮಿ ಕಾರ್ಯದರ್ಶಿ ಅಜಯ್ ಕುಮಾರ್ ಮಾತನಾಡಿ ಯೋಗವು ಮನಸ್ಸು ಮತ್ತು ದೇಹವನ್ನು ಮಾತ್ರವಲ್ಲದೇ ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸಲಿದೆ. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ ಆಗಲಿದೆ. ನಮ್ಮ ಶಾಲೆಗೆ ಅಂತರಾಷ್ಟ್ರೀಯ ಕ್ರೀಡಾಪಟು ಬಾಗೀರಥಿ ಕನ್ನಡತಿ ಬಂದಿರೋದು ಹೆಮ್ಮೆಯ ವಿಷಯ ಎಂದರು.
ಸಾರಂಗ ಅಕಾಡೆಮಿಯ ಸಿಇಓ ಕೆ.ಎನ್.ರುದ್ರೇಶ್ ಮಾತನಾಡಿ ಭಾರತ ದೇಶದ ಸಂಸ್ಕೃತಿಯಾದ ಯೋಗ ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಆಗ್ತಿರೋದು ಹೆಮ್ಮೆಯ ವಿಷಯ. ಉತ್ತರಾದ್ರ ಗೋಳದಲ್ಲಿ ಅತ್ಯಂತ ಹೆಚ್ಚು ಹಗಲು ಇರುವ ದಿನವಾದ ಜೂನ್.21ರಂದೇ ವಿಶ್ವದಾದ್ಯಂತ ಯೋಗ ದಿನಾಚರಣೆ ನಡೆಯಲಿದೆ. ನಮ್ಮ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಇನ್ನಷ್ಟು ತಿಳಿಸಿಕೊಡೊದು ನಮ್ಮೇಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಕೆಎಸ್ ಆರ್ ಪಿ ಬೇಟಾಲಿಯನ್ ಕಮಾಡೆಂಟ್ ಎಸ್ಪಿ ಹಮ್ ಜಾ ಹುಸೇನ್, ಪ್ರಾಂಶುಪಾಲ ಜೆನ್ನಿ, ಉಪನ್ಯಾಸಕರಾದ ಅಂಜುವನ, ಸಿಂದ್ರಶ್ರೀ, ನೂರ್ ಆಸಿಯಾ, ಮೇಘಶ್ರೀ, ನೂರ್ ಸಾಧಿಯಾ, ವೆಂಕಟೇಶ್, ಜಯಂತ್, ರೇಣುಕೇಶ್, ಮಲ್ಲಿ, ಕಾಂತರಾಜು ಸೇರಿದಂತೆ ಇತರರು ಹಾಜರಿದ್ದರು.