ಕಲಬುರಗಿ : ಶಾಸಕ B R ಪಾಟೀಲ್‌ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಆಯ್ಕೆ

ಶಾಸಕ ಬಿ. ಆರ್‌ ಪಾಟೀಲ್
ಶಾಸಕ ಬಿ. ಆರ್‌ ಪಾಟೀಲ್
ಕಲಬುರ್ಗಿ

ಕಲಬುರಗಿ:

ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಶಾಸಕ ಬಿ. ಆರ್‌ ಪಾಟೀಲ್‌ ಅವರಿಗೆ ರಾಜ್ಯ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ಆದೇಶ ಹೊರಡಿಸಿದೆ. ಅಲ್ಲದೆ ಬಿ ಆರ್ ಪಾಟೀಲ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.

ಮುಖ್ಯಮಂತ್ರಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಶಾಸಕ ಬಿ. ಆರ್‌ ಪಾಟೀಲ್‌ ಅವರು ಕೆಲ ದಿನಗಳ ಹಿಂದೆ ವೈಮನಸ್ಸು ಉಂಟಾಗಿ, ಕೆಲವು ಕಾರಣಗಳಿಂದ ಉನ್ನತ ಹುದ್ದೆ ಸಿಗದ ಕಾರಣ ಗರಂ ಆಗಿ ಫೆಬ್ರವರಿ 1 ರಂದು ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದರು. ಇದೀಗ ರಾಜ್ಯ ಸರ್ಕಾರವು ಅವರಿಗೆ ಹೊಸ ಹುದ್ದೆಯೊಂದನ್ನು ನೀಡಿದೆ.

ಇಂದು ಸರ್ಕಾರವು ಆಳಂದ ಶಾಸಕ ಬಿ ಆರ್ ಪಾಟೀಲ್ ಅವರನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಉಪಾಧ್ಯಕ್ಷರಾಗಿ ನೇಮಕ ಮಾಡುವುದರ ಜೊತೆಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಮತ್ತು ಎಲ್ಲಾ ಸೌಲಭ್ಯಗಳೊಂದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 

Author:

share
No Reviews