Gubbi : ಜಮೀನು ವ್ಯಾಜ್ಯಕ್ಕೆ ಕೋರ್ಟ್ ಗೆ ಬಂದ | ಬಾಗಿಲ ಬಳಿಯೇ ವ್ಯಕ್ತಿಗೆ ಹೃದಯಾಘಾತ

GUBBI : ಸಾವು ಅನ್ನೋದೆ ಹಾಗೇ ಹೇಳಿಕೇಳಿ ಬರೋಲ್ಲ. ಯಾವ ಕ್ಷಣದಲ್ಲಾದರೂ ನಮ್ಮ ಪ್ರಾಣಪಕ್ಷಿ ಹಾರಿ ಹೋಗಬಹುದು. ಈ ಕಾರಣಕ್ಕೆ ಇರುವಷ್ಟು ದಿನ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಿ ಅಂತಾರೆ. ಹೌದು ಜಮೀನು ವ್ಯಾಜ್ಯಕ್ಕೆಂದು ಕೋರ್ಟ್‌ ಬಳಿ ಬಂದ ವ್ಯಕ್ತಿ ಹೃದಯಾಘಾತವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಗುಬ್ಬಿಯಲ್ಲಿ ಜರುಗಿದೆ.

ಜಮೀನು ವ್ಯಾಜ್ಯದ ಹಿನ್ನೆಲೆ ಗುಬ್ಬಿ ಜೆ ಎಂ ಎಫ್ ಸಿ ಕೋರ್ಟ್ ಗೆ ಬಂದಿದ್ದ ವ್ಯಕ್ತಿಯೊಬ್ಬ ಕೋರ್ಟ್ ಮುಂದಿನ ಬಾಗಿಲ ಬಳಿ ಹೃದಯಾಘಾತದಿಂದ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಗುಬ್ಬಿಯಲ್ಲಿ ನಡೆದಿದೆ. ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಕಚ್ಚೇನಹಳ್ಳಿ ಗ್ರಾಮದ ನಿವಾಸಿ ರಮೇಶ್ ಸುಮಾರು 50 ವರ್ಷದ ವ್ಯಕ್ತಿ ಮೃತಪಟ್ಟ ದುರ್ದೈವಿ ಎನ್ನಲಾಗಿದೆ.  ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿ ಇಂದು ತನ್ನ ಜಮೀನು ವ್ಯಾಜ್ಯದ ಹಿನ್ನಲೆ ಕೋರ್ಟ್ ಕಲಾಪಕ್ಕೆ ಹಾಜರಾಗಲು ಬಂದಿದ್ದ. ಬಾಗಿಲ ಬಳಿ ನಿಂತಿದ್ದ ವೇಳೆ ದಿಢೀರ್ ಆಗಿ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜರುಗಿದೆ.

ಇನ್ನು ಸ್ಥಳಕ್ಕೆ ಬಂದ ಸರ್ಕಾರಿ ಅಭಿಯೋಜಕ ನಿರಂಜನ್ ಸೇರಿದಂತೆ ವಕೀಲರ ಸಂಘದ ಅಧ್ಯಕ್ಷ ಮೋಹನ್ ಮತ್ತು ಸ್ಥಳದಲ್ಲಿದ್ದ ವಕೀಲರು ಮಾನವೀಯತೆ ತೋರುವ ಮೂಲಕ ಮೃತ ವ್ಯಕ್ತಿಯನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅದಾಗಲೇ ವ್ಯಕ್ತಿ ಪ್ರಾಣಪಕ್ಷಿಯೇ ಹಾರಿಹೋಗಿತ್ತು.

Author:

...
Sushmitha N

Copy Editor

prajashakthi tv

share
No Reviews