MYSORE : RCB ಕಪ್ ಗೆದ್ದರೆ ಮೈಸೂರಿನಲ್ಲಿ ಉಚಿತ ಹೋಳಿಗೆ ಊಟ

MYSORE NEWS :ನಾಳೆ ನಡೆಯಲಿರುವ IPL FINAL ಪಂದ್ಯದಲ್ಲಿ RCB ಕಪ್ ಗೆದ್ದರೆ, ಮೈಸೂರಿನಲ್ಲಿ ಎಲ್ಲರಿಗೂ ಸಿಹಿ ಸುದ್ದಿ ಸಿಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಬಿಗ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಈ ಸಂದರ್ಭವನ್ನು ಸಂಭ್ರಮವಾಗಿ ಆಚರಿಸಲು, ಮೈಸೂರಿನ RCB ಅಭಿಮಾನಿ ಬಸವರಾಜ ಬಸಪ್ಪ ಅವರು ವಿಶಿಷ್ಟ ಆಫರ್ ಘೋಷಿಸಿದ್ದಾರೆ. RCB ಗೆದ್ದರೆ ಮೈಸೂರಿನ ಎಲ್ಲಾ 16 ಇಂದಿರಾ ಕ್ಯಾಂಟೀನ್‌ಗಳಲ್ಲಿ [INDIRA CANTEEN] ಉಚಿತ ಹೋಳಿಗೆ ಊಟ ಹಂಚಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಉದ್ದೇಶವನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಲು, ಇವತ್ತೇ ಮೈಸೂರಿನ ಗನ್ ಹೌಸ್ ವೃತ್ತದಲ್ಲಿ‌ [GUN HOUSE CIRCLE] ಉಚಿತ ಹೋಳಿಗೆ ವಿತರಣೆ ಕಾರ್ಯ ನಡೆಯಿತು. ಕೇವಲ ಅಭಿಮಾನಿಗಳೇ ಅಲ್ಲ, ಮೈಸೂರಿನ ನೂರಾರು ನಾಗರಿಕರು ಇದರಲ್ಲಿ ಭಾಗವಹಿಸಿದರು.

ಇನ್ನು ಈ ಅಭಿಯಾನವನ್ನು ಮತ್ತಷ್ಟು ವಿಶಾಲಗೊಳಿಸಲು ಬಸವರಾಜ ಬಸಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, "ಆರ್‌ಸಿಬಿ ಗೆದ್ದರೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲೂ ಉಚಿತ ಹೋಳಿಗೆ ಊಟ ಹಂಚಬೇಕೆಂದು" ಮನವಿ ಸಲ್ಲಿಸಿದ್ದಾರೆ.

ಇನ್ನು ಆರ್‌ಸಿಬಿಯ ಗೆಲುವು ಕನ್ನಡಿಗರ ಬೃಹತ್ ಕನಸು. ಅದನ್ನು ಸಂಭ್ರಮಿಸುಲು ಹೀಗೆ ಸಿಹಿಯಾದ ಹೋಳಿಗೆಯ ರೂಪದಲ್ಲಿ ಉಡುಗೊರೆ ಸಿಕ್ಕಿರುವುದು ಅಭಿಮಾನಿಗಳಿಗೆ ಖುಷಿಯ ವಿಷಯವಾಗಿದೆ.

 

Author:

...
Keerthana J

Copy Editor

prajashakthi tv

share
No Reviews