TUMAKURU : ಹೇಮಾವತಿ ಹೋರಾಟಗಾರರ ವಿರುದ್ದ FIR ದಾಖಲು | FIR ದಾಖಲಾಗಿದಕ್ಕೆ ಸೊಗಡು ಶಿವಣ್ಣ ವಿರೋಧ

TUMAKURU NEWS : HEMAVATHI EXPRESS LINK CANAL ಯೋಜನೆ ವಿರೋಧಿಸಿ, ನಿಷೇಧಾಜ್ಞೆ ಕಾನೂನನ್ನು ಉಲ್ಲಂಘಿಸಿದ್ದಾರೆಂದು  ಹೋರಾಟಗಾರರ ಮೇಲೆ FIR ದಾಖಲಾಗಿತ್ತು. ಹೋರಾಟಗಾರರು ಮತ್ತು ಮಠಾಧೀಶರ ಮೇಲೆ ದಾಖಲಾಗಿರುವ FIR ರನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ತುಮಕೂರಿನ DC ಕಚೇರಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ [SOGADU SHIVANNA] ಅಮರಣಾಂತರ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

HEMAVATHI EXPRESS LINK CANAL ಯೋಜನೆ ವಿರೋಧಿಸಿ ಮೇ.31 ರಂದು ತುಮಕೂರು ಅಕ್ಷರಶಃ ಅಲ್ಲೋಲ ಕಲ್ಲೊಲವಾಗಿತ್ತು. ಒಂದು ಕಡೆ ಪೊಲೀಸರು ಸರ್ಪಗಾವಲು ಹಾಕಿದ್ರೆ. ಮತ್ತೊಂದು ಕಡೆ ಹೋರಾಟಗಾರರು ಪೊಲೀಸರ ಯಾವುದೇ ಬೆದರಿಕೆಗೆ ಹೆದರದೆ ಎದೆಯೊಡ್ಡಿ ನಿಂತಿದ್ರು. ನಿಷೇಧಾಜ್ಞೆಯ ನಡುವೆಯೂ ಹೋರಾಟಗಾರರು ಗುಬ್ಬಿಯ ಸಂಕಾಪುರಕ್ಕೆ[ [SUNKAPURA] ನುಗ್ಗಿ ತಮ್ಮ ತಾಕತ್ತು ತೋರಿಸಿದ್ರು. ಕಾಮಗಾರಿ ಪೈಪ್‌ಗಳನ್ನು ಕಿತ್ತೆಸಿದು ಆಕ್ರೋಶ ವ್ಯಕ್ತಪಡಿಸಿದ್ರು. ಇದಾದ ಬಳಿಕಾ 13 ಜನರ ಮೇಲೆ FIR ಕೂಡ ಆಗಿತ್ತು.

ಇನ್ನು FIR ದಾಖಲಾಗಿರುವ ಕುರಿತು ತುಮಕೂರಿನ ಡಿಸಿ ಕಚೇರಿಗೆ ಆಗಮಿಸಿದ ಮಾಜಿ ಸಚಿವ ಸೊಗಡು ಶಿವಣ್ಣ, ಕಚೇರಿಯಲ್ಲಿ ಚಾಪೆ, ಬೆಡ್‌ಶಿಟ್‌, ಇಟ್ಟುಕೊಂಡು ಅಮರಣಾಂತರ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಹೇಮಾವತಿ ಹೋರಾಟಗಾರರ ಮೇಲೆ ಹಾಕಿರುವ ಕೇಸ್ ಹಿಂಪಡೆಯುವಂತೆ ಹಾಗೂ ಮಠಾಧೀಶರನ್ನ ಬಂಧಿಸದಂತೆ ಒತ್ತಾಯಿಸುತ್ತಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಸ್ವಾಮೀಜಿಗಳ ವಿರುದ್ಧ FIR ಹಾಕಿರೋದು ಅತ್ಯಂತ ಖಂಡನೀಯ. ನಮ್ಮ ಜಿಲ್ಲೆಯಲ್ಲಿ 40 ಕ್ಕೂ ಹೆಚ್ಚು ಮಠಗಳಿವೆ. ಸ್ವಾಮೀಜಿಗಳು ನೀರಿಗಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಅವರ ವಿರುದ್ಧ FIR ದಾಖಲಿಸಿರುವುದು ಸರಿಯಲ್ಲ. ಒಂದು ವೇಳೆ ನನ್ನ ಪ್ರತಿಭಟನೆಯನ್ನು ತಡೆಯಲು ಪೊಲೀಸರು ಮುಂದಾದ್ರೆ ವಿಷ ಕುಡಿಯುತ್ತೇನೆ ಅಂತ ಆಕ್ರೋಶ ಹೊರಹಾಕಿದ್ರು. ಅಲ್ದೇ ಕೂಡಲೇ FIR ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಅದೇನೇ ಇರಲಿ ಹೋರಾಟಗಾರರ ಮೇಲೆ FIR ದಾಖಲಾಗಿರುವ ಕುರಿತು ನಿನ್ನೆ ಮೈತ್ರಿ ನಾಯಕರು ಸುದ್ದಿಗೋಷ್ಠಿ [PRESSMEET] ನಡೆಸಿ ಮತ್ತೊಂದು ಗಮನಾರ್ಹ ತೀರ್ಮಾನ ತೆಗೆದುಕೊಂಡಿದ್ದಾರೆ. ಕಾಮಗಾರಿ ಮುಂದುವರೆಸಿದ್ರೆ ವಿಧಾನಸೌಧಕ್ಕೆ [VIDHANA SOUDA] ಮುತ್ತಿಗೆ ಹಾಕುವುದಾಗಿ ಗ್ರಾಮಾಂತರ ಶಾಸಕ ಸುರೇಶ್‌ ಗೌಡ [SURESH GOWDA] ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. ಇದೇ ವೇಳೆ ಗೃಹ ಸಚಿವ ಪರಮೇಶ್ವರ್ ಸುದ್ದಿಗೋಷ್ಟಿ ನಡೆಸಿ ಹೋರಾಟಗಾರರ ಮೇಲಿನ FIR ಕುರಿತು ಹೇಳಿದ್ರು. ಈ ವೇಳೆ ಸ್ವಾಮೀಜಿಗಳ ಮೇಲೆ ಎಫ್‌ಐಆರ್‌ ಇಲ್ಲ ಅಂತ ಹೇಳಿದ್ರು. ಆದ್ರೆ ಎಫ್‌ಐಆರ್‌ ಕಾಪಿಯಲ್ಲಿ ಹಲವು ಸ್ವಾಮೀಜಿಗಳ ಹೆಸರಿತ್ತು. ಈ ಕಾರಣಕ್ಕೆ ನಿನ್ನೆ ಹೋರಾಟಗಾರರು ಗೃಹ ಸಚಿವರ ವಿರುದ್ಧವು ಹರಿಹಾಯ್ದ್ರು. ಮುಂದಿನ ದಿನಗಳಲ್ಲಿ ಹೇಮೆಯ ಕಿಚ್ಚು ಯಾವ ಮಟ್ಟಕ್ಕೇರಲಿದೆ ಎಂದು ಕಾದು ನೋಡಬೇಕಿದೆ.

 

Author:

...
Keerthana J

Copy Editor

prajashakthi tv

share
No Reviews