ತುಮಕೂರು : ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ | 11 ಜನರ ವಿರುದ್ಧ ಎಫ್‌ಐಆರ್

ತುಮಕೂರು : ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ನೂರಾರು ರೈತ ಹೋರಾಟಗಾರರು ಗುಬ್ಬಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ್ದರು. ರಾಜ್ಯ ಸರ್ಕಾರದ ನಿರ್ಣಯ ಹಾಗೂ ಕಾಮಗಾರಿ ಸಂಬಂಧವಾಗಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿ ರಸ್ತೆಯ ಬ್ಲಾಕ್‌ ಮಾಡಿ, ನಿಟ್ಟೂರಿನಿಂದ ಸುಂಕಾಪುರದವರೆಗೂ ನಡೆದು ನಾಲೆಯವರೆಗೆ ತಲುಪಿ ತಾವೇಹಿಟಾಚಿ ಮೂಲಕ ಪೈಪುಗಳನ್ನು ಉರುಳಿಸಿ ಮಣ್ಣು ತುಂಬಿ ಕಾಮಗಾರಿ ನಿಲ್ಲಿಸುವಂತೆ ಪ್ರತಿಭಟನೆ ಮಾಡಿದ್ದರು.

ನಿಷೇಧಾಜ್ಞೆ ಇದ್ದರೂ ಸಹ ನಡೆಸಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಗುಬ್ಬಿ ಪೊಲೀಸ್‌ ಠಾಣೆಯಲ್ಲಿ ರೈತ ಹೋರಾಟಗಾರರ ಮೇಲೆ ಹನ್ನೋಂದು ಎಫ್‌ಐಆರ್‌ ದಾಖಲು ಮಾಡಲಾಗಿದೆ. ತುಮಕೂರು ಜಿಲ್ಲೆಯ ಇಬ್ಬರು ಸ್ವಾಮೀಜಿಗಳು ಸೇರಿದಂತೆ ಒಟ್ಟು 11 ಜನರ ವಿರುದ್ದ ಎಫ್‌ ಐಆರ್‌ ದಾಖಲು ಮಾಡಲಾಗಿದೆ. ಆದರೆ ಸ್ವಾಮೀಜಿಗಳು ಹೆಸರುಗಳು ಉಲ್ಲೇಖ ಮಾಡಿಲ್ಲ.

ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ, ಹೆದ್ದಾರಿ ಬ್ಲಾಕ್‌ ಮಾಡಿ ಸಾರ್ವಜನಿಕರಿಗೆ ತೊಂದರೆ, ಸರ್ಕಾರಿ ವಾಹನಗಳಿಗೆ ಹಾನಿ, ಹಾಗೂ ಪ್ರತಿಭಟನೆ ವೇಳೆ ಪೊಲೀಸ್‌ ಸಿಬ್ಬಂದಿ ಮೇಲೆ ಕಲ್ಲು ತೂರಾಟ, ಅಲ್ದದೇ ನಿಷೇಧಾಜ್ಞೆ ಜಾರಿಯಿದ್ದರೂ ಉಲ್ಲಂಘನೆ ಮಾಡಿ ಪ್ರತಿಭಟನೆ ನಡೆಸಿರುವ ಆರೋಪದ ಮೇಲೆ ಕೇಸ್‌ ದಾಖಲಿಸಲಾಗಿದೆ.

Author:

...
Sushmitha N

Copy Editor

prajashakthi tv

share
No Reviews