VIJAYANAGARA NEWS : ವಿದ್ಯಮಾನ ರೈತ ನೀತಿಗಳು, ಸಾಲ ಮನ್ನಾ ಘೋಷಣೆಗಳು ಕೇವಲ ಹೇಳಿಕೆಯಾಗಿದೆಯೇ ಎಂಬ ಪ್ರಶ್ನೆ ಮತ್ತೆ ಮತ್ತೆ ಏಳುತ್ತಿದೆ. ವಿಜಯನಗರ [VIJAYANAGARA] ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಟಿ. ತುಂಬಿಗೇರಿ ಗ್ರಾಮದಲ್ಲಿ, ಸಾಲದ ಒತ್ತಡಕ್ಕೆ ಸಿಲುಕಿ, ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಮೃತ ರೈತನನ್ನು 48 ವರ್ಷದ ಟಿ. ರಾಜಪ್ಪ [RAJAPPA] ಎಂದು ಗುರುತಿಸಲಾಗಿದೆ. ಕೃಷಿ ಚಟುವಟಿಕೆ [For agricultural activity]ಗಾಗಿ ಅವರು ರಾಷ್ಟ್ರೀಯಕೃತ ಬ್ಯಾಂಕ್ [Nationalized Bank] ವೊಂದರಿಂದ 3 ಲಕ್ಷ ರೂ. ಸಾಲ ಪಡೆದಿದ್ದರು. ಇತ್ತೀಚೆಗೆ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಯ ನೋಟಿಸ್ ಕಳಿಸಿದ್ದರು.
ಇದರ ಜೊತೆಗೆ, MICRO FINANCE ಕಂಪನಿಗಳಿಂದ ಕೂಡಾ ಸುಮಾರು 7 ಲಕ್ಷ ರೂಪಾಯಿ ಸಾಲ ಪಡೆದಿದ್ದ ರಾಜಪ್ಪ, ನಿರಂತರವಾಗಿ ಫೋನ್ ಕರೆಮೂಲಕ, ಹಣ ಮರುಪಾವತಿಸುವಂತೆ ಕಿರುಕುಳ[Harassment] ನೀಡುತ್ತಿದ್ದರು ಎನ್ನಲಾಗಿದೆ. ಇನ್ನು"ಸಾಲದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕಾರಣ ಇದರಿಂದ ಮನನೊಂದು ರಾಜಪ್ಪ ಅವರು ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ[sucide] ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರಿಂದ ತಿಳಿದು ಬಂದಿದೆ.
ಇನ್ನು ಸ್ಥಳಕ್ಕೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಇನ್ನು ಈ ಸಂಬಂಧ ಹಲುವಾಗಲು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.