ತುಮಕೂರು : ಎಂದಿನಂತೆ ಮಹಿಳೆಯೊಬ್ಬರು ಬೆಳಗ್ಗೆ ಅಡುಗೆ ಮಾಡಲು ಅಡುಗೆ ಮನೆಗೆ ಹೋಗಿದ್ದಾರೆ. ಅಡುಗೆ ಮನೆಯಲ್ಲಿ ಭಾರೀ ಗಾತ್ರದ ಹಾವೊಂದು ಓಡಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮಹಿಳೆಯ ಕಿರುಚಾಟ ಕೇಳಿ ಓಡಿ ಬಂದ ಕುಟುಂಬಸ್ಥರು ಹಾವನ್ನು ಕಂಡು ಕಂಗಾಲಾಗಿರುವ ಘಟನೆ ತುಮಕೂರಿನ ಸಾಯಿನಗರದಲ್ಲಿ ನಡದಿದೆ.
ತುಮಕೂರಿನ ಸಾಯಿನಗರದ ಲಿಖಿತ ಎಂಬುವವರು ಮನೆಯ ಅಡುಗೆ ಮನೆಯಲ್ಲಿ ಹಾವು ಕಂಡುಬಂದಿದ್ದು, ಕುಟುಂಬಸ್ಥರು ಕೆಲಕಾಲ ಬೆಚ್ಚಿಬಿದ್ದಿದ್ದರು. ಎಂದಿನಂತೆ ಬೆಳಗ್ಗೆ ಅಡುಗೆ ಮಾಡಲು ಹೋದಾಗ ಹಾವನ್ನು ಕಂಡ ಮಹಿಳೆ ಗಾಬರಿಗೊಂಡಿದ್ದಾರೆ. ಅಡುಗೆ ಮನೆಯಲ್ಲೆಲ್ಲ ಓಡಾಡುತ್ತಿದ್ದ ಹಾವನ್ನು ನೋಡಿದ ಕುಟುಂಬಸ್ಥರು ದಂಗಾಗಿದ್ದಾರೆ. ಕೂಡಲೇ ತುಮಕೂರಿನ ಉರಗ ರಕ್ಷಕ ದಿಲೀಪ್ ಗೆ ಕರೆ ವಿಷಯ ತಿಳಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಉರಗ ರಕ್ಷಕ ದಿಲೀಪ್ ಅಡುಗೆ ಮನೆಯಲ್ಲಿ ಅಡಗಿದ್ದ ಹಾವನ್ನು ಹರಸಾಹಸ ಮಾಡಿ ಹಿಡಿದಿದ್ದು, ಸದ್ಯ ಹಾವನ್ನು ಸುರಕ್ಷಿತವಾಗಿ ಹಿಡಿದು ದೇವರಾಯನದುರ್ಗ ಕಾಡಿಗೆ ಬಿಟ್ಟಿದ್ದಾರೆ. ಇತ್ತ ಹಾವು ವಿಷಪೂರಿತವಲ್ಲ, ಕೆರೆ ಹಾವು ಎಂದು ತಿಳಿದು ನಿಟ್ಟುಸಿರು ಬಿಟ್ಟಿದೆ ಕುಟುಂಬ.