ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ, ವಾರ್ಡ್ ನಂ.01 ರಲ್ಲಿ ಸಾರ್ವಜನಿಕರ ಸಂಚಾರಕ್ಕೆ ನಿಗದಿಯಾದ ಮುಖ್ಯ ರಸ್ತೆಯನ್ನು ಸಿ.ಕೆ ಸಿದ್ದರಾಮಯ್ಯ ಎಂಬ ಖಾಸಗಿ ವ್ಯಕ್ತಿ ಅತಿಕ್ರಮಣ ಮಾಡಿಕೊಂಡಿದ್ದು, ಆತನ ವಿರುದ್ಧ ಜನರು ದೂರು ದಾಖಲಿಸಿದ್ದಾರೆ. ದೂರಿನ ಸಂಬಂಧ ವಿಚಾರಣೆ ನಡೆಸಿರೋ ಕೋರ್ಟ್ ಸಂಶೋಧಿತ ಜಾಗವು ಸಾರ್ವಜನಿಕ ರಸ್ತೆ ಎಂಬುದಾಗಿ ದೃಢಪಡಿಸಿ, ಸಿದ್ದರಾಮಯ್ಯ ಅವರಿಗೆ ಒತ್ತುವರಿ ತೆರವುಗೊಳಿಸಲು ಸ್ಪಷ್ಟ ಆದೇಶ ನೀಡಿದೆ. ಆದ್ರೆ ಈತ ಮಾತ್ರ ಕೋರ್ಟ್ನ ಆದೇಶವನ್ನು ಧಿಕ್ಕರಿಸಿ ಒತ್ತುವರಿಯನ್ನು ತೆರವು ಮಾಡ್ತಿಲ್ಲ ಹೀಗಾಗಿ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.
ಇನ್ನು ರಸ್ತೆ ಒತ್ತುವರಿ ಸಂಬಂಧ ಚಿಕ್ಕನಾಯಕನಹಳ್ಳಿ ಪುರಸಭೆ ಕೂಡ ನೋಟಿಸ್ ಕೊಟ್ಟಿದೆ. ಆದ್ರೆ ಪುರಸಭೆ ನೋಟಿಸ್ಗೂ ಕಾವಡೆ ಕಾಸಿನ ಕಿಮ್ಮತ್ತು ನೀಡದೇ ರಸ್ತೆ ಒತ್ತುವರಿಯನ್ನು ತೆರವು ಮಾಡ್ತಿಲ್ಲ. ಇದ್ರಿಂದ ನಿತ್ಯ ರಸ್ತೆಯಲ್ಲಿ ಓಡಾಡಲು ಜನರು ಸಂಕಷ್ಟ ಪಡುತ್ತಿದ್ದು ರಸ್ತೆ ಒತ್ತುವರಿ ಮಾಡಿಕೊಂಡಿರೋ ಸಿದ್ದರಾಮಯ್ಯ ವಿರುದ್ದ ಜನರು ಆಕ್ರೋಶ ಹೊರಹಾಕ್ತಿದ್ದಾರೆ. ಅಕ್ರಮ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಿ ಸಾರ್ವಜನಿಕರ ಹಕ್ಕು ಮತ್ತು ಸೌಕರ್ಯವನ್ನು ಕಾಪಾಡಬೇಕೆಂಬುದು ಪುರಸಭೆ ನಾಮಿನಿ ಸದಸ್ಯ ಮೊಹಮ್ಮದ್ ಹುಸೇನ್ ಗುಂಡ ಒತ್ತಾಯ ಮಾಡಿದ್ದಾರೆ.
ಇನ್ನಾದ್ರು ರಸ್ತೆ ಒತ್ತುವರಿ ಮಾಡಿಕೊಂಡಿರೋ ವ್ಯಕ್ತಿ ಒತ್ತುವರಿಯನ್ನು ತೆರವು ಮಾಡಿ, ಜನರ ಸಂಚಾರಕ್ಕೆ ಅವಕಾಶ ಕೊಡ್ತಾರಾ ಎಂದು ಕಾದುನೋಡಬೇಕಿದೆ.