BAGALAKOTE : ರಾಜ್ಯದಲ್ಲಿ ಮತ್ತೆ ಗೋವಿನ ಮೇಲೆ ಕಿಡಿಗೇಡಿತನ | ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು

BAGALAKOTE NEWS : ಬಾಗಲಕೋಟೆ ಜಿಲ್ಲೆಯ ಕುಳಗೇರಿ ಕ್ರಾಸ್‌ನಲ್ಲಿ ಮಲಗಿದ್ದ ಹಸುವಿನ ಕೆಚ್ಚಲನ್ನು ದುಷ್ಕರ್ಮಿಗಳು ಕತ್ತರಿಸಿರುವ ಪೈಶಾಚಿಕ ಘಟನೆ ನಡೆದಿದೆ. ಈ ಕ್ರೂರತೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ತಾಲೂಕಿನ ಕುಳಗೇರಿ ಗ್ರಾಮದ ಭರಮಪ್ಪ ಕುರಿಯವರ ಮನೆಯ ಪಕ್ಕದಲ್ಲೇ ಕಟ್ಟಿ ಹಾಕಿದ್ದ ಹಸುವಿನ ಕೆಚ್ಚಲನ್ನು ದುಷ್ಕರ್ಮಿಗಳು ರಾತ್ರಿಯಲ್ಲಿ ಕತ್ತರಿಸಿದ್ದಾರೆ. ಬೆಳಿಗ್ಗೆ ರಕ್ತಸ್ರಾವವಾಗುತ್ತಿರುವುದು ಕಂಡು ಬಂದ ಕೂಡಲೆ, ಭರಮಪ್ಪ ಅವರು ಹಸುವನ್ನು ಪಶು ಆಸ್ಪತ್ರೆಗೆ ಕರೆದೊಯ್ದರು. ಹಸುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದಕ್ಕಿಂತ ಮೊದಲೂ ಇಂತಹವೇ ಕ್ರೂರ ಕೃತ್ಯಗಳು ರಾಜ್ಯದ ಹಲವು ಭಾಗಗಳಲ್ಲಿ ನಡೆದಿದ್ದು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿಗೆ ಇಂತಹವೇ ರೀತಿಯಲ್ಲಿ ಹಾನಿ ಮಾಡಿದ್ದ ಪ್ರಕರಣ ರಾಜ್ಯಾದ್ಯಂತ ಆಕ್ರೋಶ ಹುಟ್ಟಿಸಿತ್ತು. ಆದರೆ ಈ ರೀತಿ ಪ್ರಕರಣಗಳು ಪುನಃ ಪುನಃ ನಡೆಯುತ್ತಿರುವುದು ಕಾನೂನು ಕ್ರಮದ ಗಂಭೀರತೆಯನ್ನು ಪ್ರಶ್ನಿಸುತ್ತದೆ.

ಪಶುಗಳ ಮೇಲಿನ ಕ್ರೂರತೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಪರಿಸ್ಥಿತಿಯಲ್ಲಿ, ಕಾನೂನು ನಿರ್ವಹಣಾ ವ್ಯವಸ್ಥೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. 

Author:

...
Keerthana J

Copy Editor

prajashakthi tv

share
No Reviews