ರಾಜ್ಯ : ಐದು ವರ್ಷಗಳ ಹಿಂದೆ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ್ದ ಕೊರೊನಾ ವೈರಸ್ (COVID-19) ಮತ್ತೆ ತೀವ್ರತೆ ಪಡೆದುಕೊಳ್ಳುತ್ತಿದೆ. ಭಾರತದಲ್ಲಿ ಕಳೆದ ಎರಡು ದಿನಗಳಲ್ಲಿ 257 ಹೊಸ ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬೆಳವಣಿಗೆಗೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಕೋವಿಡ್-19 ವಿರುದ್ಧ ಮತ್ತೆ ಸಜ್ಜಾಗುವ ಕಾಲ ಬಂದಿದೆ ಎಂಬ ಎಚ್ಚರಿಕೆಯನ್ನು ನೀಡಿದೆ.
*ಟೆಸ್ಟಿಂಗ್ ಕಡ್ಡಾಯ: ಆರೋಗ್ಯ ಇಲಾಖೆಯ ಹೊಸ ಸುತ್ತೋಲೆ
ಕೊರೊನಾ ಪ್ರಕರಣಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯ ಇಲಾಖೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ತಾಂತ್ರಿಕ ಸಲಹಾ ಸಮಿತಿಯ ಸೂಚನೆಯಂತೆ:
- ಎಲ್ಲಾ SARI (Severe Acute Respiratory Infection) ಪ್ರಕರಣಗಳಲ್ಲಿ RT-PCR ಪರೀಕ್ಷೆ ಕಡ್ಡಾಯ.
- ರಾಜ್ಯದಲ್ಲಿ ದಿನ ನಿತ್ಯ 150 ರಿಂದ 200 ಟೆಸ್ಟ್ಗಳಿಗೆ ಗುರಿ.
- ಎಲ್ಲ ಸ್ಯಾಂಪಲ್ಗಳನ್ನು ನಿಗದಿತ ಲ್ಯಾಬ್ಗಳಿಗೆ ಅಂದಿನ ಅಂದೇ ಸಲ್ಲಿಸುವುದು ಕಡ್ಡಾಯ.
- ಪರೀಕ್ಷೆಗಳನ್ನು ಸರ್ಕಾರಿ ಲ್ಯಾಬ್ಗಳಲ್ಲಿಯೇ ನಡೆಸಬೇಕು.
- ಲಭ್ಯವಿರುವ ಪರೀಕ್ಷಾ ಕಿಟ್ಗಳನ್ನು FIFO (First-In-First-Out) ಮಾದರಿಯಲ್ಲಿ ಬಳಸಬೇಕು.
- ಅವಧಿ ಮೀರಿದ ಅಥವಾ ಬಳಕೆಗೆ ಅಸಾಧ್ಯವಾದ ಕಿಟ್ಗಳನ್ನು ಬೇರ್ಪಡಿಸಿ ನಿರ್ವಹಣೆ ಮಾಡಬೇಕು.
*ಮಾಸ್ಕ್, ಸಾಮಾಜಿಕ ಅಂತರ ಮತ್ತೆ ಅಡ್ಡಲಾಗಿ
ಅಧಿಕಾರಿಗಳು ಸಾರ್ವಜನಿಕರಿಗೆ ಮಾಸ್ಕ್ ಧರಿಸುವುದು, ಹೆಚ್ಚಿನ ಜನಜಾನುವಾರಿ ಇರುವ ಸ್ಥಳಗಳಲ್ಲಿ ದೂರ ಕಾಯುವುದು ಮತ್ತು ಕೈ ತೊಳೆಯುವಂತಹ ಮೂಲಭೂತ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ.
*ಲಾಕ್ಡೌನ್ ಬಗ್ಗೆ ಏನು?
ಲಾಕ್ಡೌನ್ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇಲ್ಲದಿದ್ದರೂ, ಸೋಂಕಿನ ಅಲೆ ಹೆಚ್ಚಾದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಬಹು ದು ಎಂಬ ಸೂಚನೆ ಸೃಷ್ಟಿಯಾಗಿದೆ.
*ಆತಂಕವಿಲ್ಲ, ಆದರೆ ಎಚ್ಚರಿಕೆಯಿಂದಿರಿ
ಆರೋಗ್ಯ ಇಲಾಖೆ ಜನರಲ್ಲಿ ಭಯ ಹುಟ್ಟಿಸಬಾರದು ಎಂದು ಹೇಳಿದ್ದು, ಆದರೆ ಕೋವಿಡ್-19 ಮತ್ತೆ ತಲೆ ಎತ್ತುತ್ತಿರುವುದರಿಂದ ಎಚ್ಚರಿಕೆ ಮತ್ತು ಜವಾಬ್ದಾರಿ ಮುಖ್ಯ ಎಂಬ ಸಂದೇಶ ನೀಡಿದೆ.